Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Vishnuvardhan- Rajkumar: ಅಣ್ಣಾವ್ರಿಗೆ ಸಿಕ್ಕಂತಹ ಗೌರವ ವಿಷ್ಣುವರ್ಧನ್ ಅವರಿಗೆ  ಯಾಕೆ ಸಿಗಲಿಲ್ಲ ಗೊತ್ತೆ?? ಆ ಕಾಲದಲ್ಲಿಯೂ ಸ್ಟಾರ್ ವಾರ್ ನಡಿತಾ?

ಅಣ್ಣಾವ್ರು ತಮ್ಮದೇ ವಿಶಿಷ್ಟ ರೀತಿಯಾದಂತಹ ಸಿನಿಮಾಗಳನ್ನು ಆಯ್ಕೆಮಾಡಿಕೊಂಡು ಅಭಿಮಾನಿಗಳನ್ನು ರಂಜಿಸಿದರೆ, ಡಾಕ್ಟರ್ ವಿಷ್ಣುವರ್ಧನ್ ತಮಗೆ ಸೂಕ್ತವೆನಿಸುವಂತಹ ಜಾನರ್ ಸಿನಿಮಾಗಳಲ್ಲಿ ನಟಿಸಿದರು.

Vishnuvardhan- Rajkumar: ಸ್ನೇಹಿತರೆ, ಕನ್ನಡ ಚಿತ್ರರಂಗದ ದಂತಕಥೆ ಎಂದರೇ ಕನ್ನಡ ಅಭಿಮಾನಿಗಳಿಗೆ ನೆನಪಾಗುವುದು ಅಣ್ಣಾವ್ರು. ಅದೇ ರೀತಿಯಾಗಿ ಕನ್ನಡ ಚಿತ್ರರಂಗದ ಹೃದಯವಂತ ಎಂದರೆ ನೆನಪಾಗುವುದು ವಿಷ್ಣು ದಾದಾ. ಹರಿ ಸ್ನೇಹಿತರೆ ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಇಬ್ಬರೂ ನಮ್ಮ ಕನ್ನಡ ಚಿತ್ರರಂಗವನ್ನು ಬಹು ಎತ್ತರಕ್ಕೆ ಕೊಂಡೊಯ್ದವರು.

ಈ ಇಬ್ಬರ ಕಾಂಬಿನೇಷನ್ನಲ್ಲಿ ಗಂಧದಗುಡಿ ಸಿನಿಮಾ ಬಿಟ್ಟರೆ ಮತ್ತೊಂದು ಸಿನಿಮಾ ಬರಲಿಲ್ಲ ಎನ್ನುವುದು ಎಷ್ಟು ಸತ್ಯನೋ, ಇಬ್ಬರು ಮತ್ತೆ ಸಿನಿಮಾ ಮಾಡಬೇಕಿತ್ತು ಎಂದು ಪ್ರೇಕ್ಷಕರು ಕೊರಗುವುದು ಅಷ್ಟೇ ಸತ್ಯ. ಹೌದು ಸಿನಿಮಾ ಶೂಟಿಂಗ್ ಸಮಯದಲ್ಲಿ ಉಂಟಾದಂತಹ ಕೆಲವು ಗೊಂದಲಗಳಿಂದಾಗಿ ಇಬ್ಬರು ಮತ್ತೆ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ.

ಅಣ್ಣಾವ್ರು ತಮ್ಮದೇ ವಿಶಿಷ್ಟ ರೀತಿಯಾದಂತಹ ಸಿನಿಮಾಗಳನ್ನು ಆಯ್ಕೆಮಾಡಿಕೊಂಡು ಅಭಿಮಾನಿಗಳನ್ನು ರಂಜಿಸಿದರೆ, ಡಾಕ್ಟರ್ ವಿಷ್ಣುವರ್ಧನ್ ತಮಗೆ ಸೂಕ್ತವೆನಿಸುವಂತಹ ಜಾನರ್ ಸಿನಿಮಾಗಳಲ್ಲಿ ನಟಿಸಿದರು. ಹೀಗೆ ಡಾಕ್ಟರ್ ರಾಜಕುಮಾರ್ ಅವರಂತೆಯೇ ಹೆಸರುಮಾಡಿದ ವಿಷ್ಣುವರ್ಧನ್ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ ರಾದರು ಅಲ್ಲದೆ ಕಷ್ಟ ಎಂದು ಬೇಡಿ ಬಂದವರನ್ನು ಬರಿಗೈಯಲ್ಲಿ ಕಳಿಸಿದವರಲ್ಲ ನಮ್ಮ ಕರ್ಣ. ವಿಷ್ಣುವರ್ಧನ್ ತಮ್ಮ ಕೊನೆಗಾಲದವರೆಗೂ ಕೂಡ ದಾನ-ಧರ್ಮಕ್ಕೆ ಹೆಸರು ಮಾಡಿದವರು.

ಹೀಗೆ ಬರೋಬ್ಬರಿ 250ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ಸರ್ಕಾರವು ಡಾಕ್ಟರೇಟ್ ಪದವಿ ಒಂದನ್ನು ಹೊರತುಪಡಿಸಿ ಬೇರೆ ಯಾವ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಲಿಲ್ಲ ಇದು ವಿಷ್ಣುವರ್ಧನ್ ಅವರ ಮನಸ್ಸಿನಲ್ಲಿ ಇದ್ದಂತಹ ಕೊರಗು. ಹೌದು ಬಂಧನ ಸಿನಿಮಾ ಅನೌನ್ಸ್ ಮಾಡುವ ಮುನ್ನವೇ ವಿಷ್ಣುವರ್ಧನ್ ಈ ಕುರಿತಾಗಿ ಬೇಸರವನ್ನು ವ್ಯಕ್ತಪಡಿಸಿ ಸಿನಿಮಾ ರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿಬಿಟ್ಟಿದ್ದರು.

ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಬಂಧನ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದರು. ಹೀಗೆ ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನೀಡಿದ ವಿಷ್ಣುದಾದಾರ ವೀರಪ್ಪ ನಾಯಕ ಮತ್ತು ಮುತ್ತಿನ ಹಾರ ಸಿನಿಮಾಗಳಿಗೆ ಅತ್ಯುನ್ನತ ಪ್ರಶಸ್ತಿ ಲಭಿಸುತ್ತವೆ ಎಂಬ ಮಾತು ಆ ಕಾಲದಲ್ಲಿ ದೊಡ್ಡಮಟ್ಟದ ಸದ್ದು ಮಾಡಿತ್ತು.

ಆದರೆ ಪ್ರಶಸ್ತಿಗೆ ಭಾಜನರಾದವರು ಹೆಸರು ಹೊರಬಂದಾಗ ಅಲ್ಲಿ ವಿಷ್ಣು ದಾದಾರ ಹೆಸರು ಇರದಿರುವುದು ವಿಷ್ಣುವರ್ಧನ್ ಮತ್ತು ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿತ್ತು. ಹೀಗೆ ಅಣ್ಣಾವ್ರ ಸಮಕ್ಕೆ ನಿಲ್ಲಬಲ್ಲ ನಟನೆಂದರೆ ಅದು ವಿಷ್ಣುವರ್ಧನ್ ಎಂಬುದು ಎಲ್ಲರಿಗೂ ತಿಳಿದ ವಿಷಯ ಇದನ್ನು ಸರ್ಕಾರ ಗುರುತಿಸಿ ಗೌರವಿಸಿಲ್ಲ ಎಂಬ ಕೊರಗು ಇನ್ನೂ ಅಭಿಮಾನಿಗಳಲ್ಲಿದೆ.

Unknown Facts about Vishnuvardhan-Rajkumar

Leave a comment