Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Shivanna-Vishnu: ಶಿವರಾಜ್ ಕುಮಾರ್ರವರ ಆನಂದ್ ಸಿನಿಮಾ ನೋಡಿ ಮನಸೋತ ವಿಷ್ಣುದಾದಾ ಶಿವಣ್ಣನನ್ನು ಮನೆಗೆ ಕರೆದು ನೀಡಿದ ದುಬಾರಿ ಉಡುಗರೆಯಾದರೂ ಏನು ಗೊತ್ತಾ?

ಹೌದು ಸ್ನೇಹಿತರೆ ಒಂದು ಕಾಲದಲ್ಲಿ ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾ ಬಿಡುಗಡೆಯಾದಾಗ ಎಲ್ಲಿಲ್ಲದಂತಹ ಸಂಚಲನ ಕ್ರಿಯೇಟ್ ಮಾಡಿತ್ತು.

Shivanna-Vishnu: ಸ್ನೇಹಿತರೆ, ನಾಗರಹಾವು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಂತಹ ವಿಷ್ಣುವರ್ಧನ್ ಯಜಮಾನ, ಸೂರ್ಯವಂಶ, ಕೋಟಿಗೊಬ್ಬ, ರಾಜ ನರಸಿಂಹ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ಕನ್ನಡಿಗರಿಗೆ ನೀಡುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಇನ್ನು ನಾಗರಹಾವು ಸಿನಿಮಾದಲ್ಲಿ ಅವರ ರಾಮಾಚಾರ್ಯ ಪಾತ್ರ, ಕಾಲೇಜು ಹುಡುಗನಲ್ಲಿ ಇದ್ದಂತಹ ರೋಷ, ತನ್ನ ಮೇಷ್ಟ್ರು ಹಾಕಿದಂತಹ ಭಕ್ತಿ ಎಲ್ಲವೂ ಕೂಡ ಈಗಲೂ ಕೂಡ ಪಡ್ಡೆ ಹುಡುಗರಲ್ಲಿ ಅದೊಂದು ಛಲವನ್ನು ತುಂಬಿಸುತ್ತದೆ.

ಹೌದು ಸ್ನೇಹಿತರೆ ಒಂದು ಕಾಲದಲ್ಲಿ ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾ ಬಿಡುಗಡೆಯಾದಾಗ ಎಲ್ಲಿಲ್ಲದಂತಹ ಸಂಚಲನ ಕ್ರಿಯೇಟ್ ಮಾಡಿತ್ತು. ಎಲ್ಲ ಥಿಯೇಟರ್ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಂತಹ ಈ ಸಿನಿಮಾವನ್ನು ತಮಿಳಿನ ಎಂಜಿಆರ್ ಕೂಡ ನೋಡಿ ಒಪ್ಪಿದ್ದಾರಂತೆ. ಹೌದು ಸ್ನೇಹಿತರೆ ಡಾಕ್ಟರ್ ವಿಷ್ಣುವರ್ಧನ್ ಅವರ ರಾಮಾಚಾರಿ ಪಾತ್ರವನ್ನು ಮನಃಸ್ಪೂರ್ತಿಯಾಗಿ ಮೆಚ್ಚಿದಂತಹ ತಮಿಳಿನ ಖ್ಯಾತ ನಟ ಎಂಜಿಆರ್ ವಿಷ್ಣುವರ್ಧನ್ ಅವರಿಗೆ ಕರೆ ಮಾಡಿ ತಮ್ಮ ಮನೆಗೆ ಆಗಮಿಸುವಂತೆ ಹೇಳಿ, ತಮ್ಮ ಕೈಯಲ್ಲಿದ್ದಂತಹ ದುಬಾರಿ ವಾಚ್ ಒಂದನ್ನು ವಿಷ್ಣು ದಾದಾನ ಕೈಗೆ ತೋರಿಸಿ ನಿನ್ನ ಆಕ್ಟಿಂಗ್ಗೆ ಸಂಪೂರ್ಣ ಮನಸೋತೆ ಎಂದು ಹೊಗಳಿದರಂತೆ.

ಇನ್ನು ಇದೇ ಕೆಲಸವನ್ನು ವಿಷ್ಣುವರ್ಧನ್ ಅವರು ಶಿವರಾಜ್ ಕುಮಾರ್ ಅವರ ಆನಂದ ಸಿನಿಮಾ ರಿಲೀಸ್ ಆದಾಗ ಸಿನಿಮಾ ನೋಡಿ ಶಿವಣ್ಣನ ಅಭಿನಯವನ್ನು ಮೆಚ್ಚಿ ಅವರಿಗೆ ಕರೆ ಮಾಡಿ ಶುಭಾಶಯವನ್ನು ತಿಳಿಸುತ್ತಾ, ಭೇಟಿ ಮಾಡಿ ಎಂಜಿಆರ್ ತನಗೆ ಪ್ರೀತಿಯಿಂದ ಕೊಟ್ಟಂತಹ ವಾಚ್ ಒಂದನ್ನು ಶಿವಣ್ಣನಿಗೆ ನೀಡಿ ದಿನಗಳಲ್ಲಿ ತಂದೆಯಂತೆ ಹೆಸರು ಮಾಡುವುದಂತೂ ಖಂಡಿತ ಎಂದು ಶುಭಹಾರೈಸಿದರಂತೆ ಈ ಮಾತು ಇಂದು ಶಿವರಾಜಕುಮಾರ್ ಅವರ ಬಾಳಲ್ಲಿ ನಿಜವಾಗಿದೆ ಎಂದರೆ ತಪ್ಪಾಗಲಾರದು.

Unknown facts about Shiva Rajkumar and Vishnuvardhan

Leave a comment