Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Appu-Rajkumar: ಮಕ್ಕಳಿಗೆ ಗದರುವುದ್ದಕ್ಕೂ ಯೋಚನೆ ಮಾಡುತ್ತಿದ್ದ ಅಣ್ಣಾವ್ರು, ಕೋಪ ತಡೆಯಲಾಗದೆ ಅಪ್ಪುಗೆ ಹೊಡೆದಿದ್ದೇಕೆ ಗೊತ್ತಾ? ಅಷ್ಟಕ್ಕೂ ಅವತ್ತು ಅಪ್ಪು ಮಾಡಿದ ತಪ್ಪಾದರೂ ಏನು?

ಹೌದು ಸ್ನೇಹಿತರೆ ಡಾಕ್ಟರ್ ರಾಜಕುಮಾರ್ ತಮ್ಮ ಮಕ್ಕಳಿಗೆ ಎಂದೂ ಗದರಿ ಹೊಡೆದು ಹೆದರಿಸಿ ಬೆಳೆಸಿದವರಲ್ಲ, ಬದಲಿಗೆ ಪ್ರೀತಿಯಿಂದ ಮಕ್ಕಳು ಮಾಡುವಂತಹ ತಪ್ಪುಗಳನ್ನು ತಿದ್ದುತ್ತಿದ್ದರು.

Appu-Rajkumar: ಸ್ನೇಹಿತರೆ, ತಂದೆತಾಯಿಯು ತಮ್ಮ ಮಕ್ಕಳನ್ನು ಚಿಕ್ಕಂದಿನಲ್ಲಿ ಹೇಗೆ ಲಾಲನೆ ಪಾಲನೆ ಮಾಡುತ್ತಾರೆ? ಅವರು ಮಾಡುವಂತಹ ತಪ್ಪುಗಳನ್ನು ಹೇಗೆ ತಿದ್ದಿ ಬುದ್ಧಿ ಹೇಳುತ್ತಾರೆ? ಎಂಬುದರ ಮೇಲೆ ಮಕ್ಕಳ ಮುಂದಿನ ಬೆಳವಣಿಗೆ ರೂಪುಗೊಂಡಿರುತ್ತದೆ. ಹೀಗಾಗಿ ಮಕ್ಕಳು ಬೆಳೆದು ಒಂದು ಹಂತಕ್ಕೆ ತಲುಪುವವರೆಗೂ ಮಕ್ಕಳಿಗೆ ಹೊಡೆಯದೆ ಬಡಿಯದೆ ಪ್ರೀತಿಯಿಂದ ಅರ್ಥ ಮಾಡಿಸಿದರೆ ಅವರು ಶಿವಣ್ಣ ರಾಘಣ್ಣ ಅಪ್ಪುರವರಂತಹ ಮುತ್ತುರತ್ನಗಳ ಆಗುತ್ತಾರೆ. ಹೌದು ಸ್ನೇಹಿತರೆ ಡಾಕ್ಟರ್ ರಾಜಕುಮಾರ್ ತಮ್ಮ ಮಕ್ಕಳಿಗೆ ಎಂದೂ ಗದರಿ ಹೊಡೆದು ಹೆದರಿಸಿ ಬೆಳೆಸಿದವರಲ್ಲ, ಬದಲಿಗೆ ಪ್ರೀತಿಯಿಂದ ಮಕ್ಕಳು ಮಾಡುವಂತಹ ತಪ್ಪುಗಳನ್ನು ತಿದ್ದುತ್ತಿದ್ದರು.

ಆದರೆ ಅದೊಂದು ದಿನ ಕೋಪ ತಾಳಲಾರದೆ ಡಾಕ್ಟರ್ ರಾಜಕುಮಾರ್ ಪುನೀತ್ ಅವರ ಮೇಲೆ ಕೈ ಮಾಡಿದ್ದೇಕೆ? ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಫ್ರೆಂಡ್ಸ್ ಸಂದರ್ಶನವೊಂದರಲ್ಲಿ ಪುನೀತ್ ರಾಜಕುಮಾರ್ “ನಮ್ಮಪ್ಪನಿಗೆ ಅತಿಯಾದ ಕೋಪ ಬಂದಾಗ ನನ್ನ ಇಬ್ಬರು ಅಣ್ಣಂದಿರು ಹಾಗೂ ನನ್ನ ಅಕ್ಕನಿಗೆ ಬೈಯುತ್ತಿದ್ದರು. ನಾನು ಹೇಗೋ ಬಚಾವಾಗುತ್ತದೆ ಇಲ್ಲವಾದರೆ ಅಪ್ಪಾಜಿ ಎಲ್ಲಾದರೂ ಹೊರಡಬೇಕಾದರೆ ನಾವು ರೆಡಿಯಾಗುವುದು ತಡವಾಗುತ್ತಿತ್ತು ಆಗ ಕೋಪದಿಂದ ನಮಗೆ ಗದರುತ್ತಿದ್ದರು.

ಅದನ್ನು ಬಿಟ್ಟರೆ ಅಯ್ಯೋ ಬಡ್ಡಿಮಗನೆ.. ಎಂಬ ಮಾತನ್ನು ಮಾತ್ರ ನಾನು ನಮ್ಮ ಅಪ್ಪಾಜಿಯ ಬಾಯಿಂದ ಕೇಳಿರುವುದು. ಇನ್ನೊಂದು ಮಾಹಿತಿ ನಿಮಗೆ ಹೇಳುವುದಾದರೆ ಶಂಕರ್ ಗುರು ಸಿನಿಮಾದ ಶೂಟಿಂಗ್ ಸಮಯದಲ್ಲಿ ನಾನು ಮತ್ತು ನನ್ನ ಗೆಳೆಯ ಸತೀಶ್ ಇಬ್ಬರು ಜಗಳವಾಡುತ್ತಿದ್ದೆವು. ಆ ಜಗಳ ಅತಿರೇಕಕ್ಕೆ ಹೋಗಿ ನಾನು ಕೋಪ ಬಂದು ಅವನಿಗೆ ಹೊಡೆದು ಬಿಟ್ಟಿದ್ದೆ ಇದು ನನ್ನ ತಂದೆಗೆ ಗೊತ್ತಾದಾಗ ಅಪ್ಪಾಜಿ ನನಗೆ ಚೆನ್ನಾಗಿ ಹೊಡೆದಿದ್ದರು” ಎನ್ನುತ್ತಾ ಅಪ್ಪು ಬದುಕಿದ್ದಾಗ ತಂದೆಯ ಮಾತನ್ನು ಮೆಲುಕುಹಾಕಿದರು.

Unknown facts about Puneeth Rajkumar and Rajkumar

Leave a comment