Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Ambarish: ಡಾಕ್ಟರ್ ವಿಷ್ಣುವರ್ಧನ್ ಅಗಲಿದ ದಿನ ಅಂಬಿ ಆಡಿದ ಮಾತು ಇಂದಿಗೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ!! ಅಷ್ಟಕ್ಕೂ ಆ ಕರಾಳ ದಿನ ಅಂಬಿ ಹೇಳಿದ್ದಾದರೂ ಏನು ಗೊತ್ತಾ?

ಇನ್ನು ಅಂಬಿಗೆ ಏನಾದರೂ ತೊಂದರೆಯಾದರೆ ವಿಷ್ಣು ಮುಂದೆ ಇರುತ್ತಿದ್ದರು, ವಿಷ್ಣುಗೆ ಕೊಂಚ ನೋವಾದರೂ ಅಂಬಿ ಸಮಾಧಾನಪಡಿಸುತ್ತಿದ್ದರು.

Ambarish: ಸ್ನೇಹಿತರೆ, ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಆಪ್ತಮಿತ್ರರಿದ್ದಾರೆ, ಆದ್ರೆ ಸ್ನೇಹಕ್ಕೆ ಮತ್ತೊಂದು ಹೆಸರೇ ಅಂಬಿ ಮತ್ತು ವಿಷ್ಣು ಎನ್ನುವಷ್ಟರ ಮಟ್ಟಿಗೆ ತಮ್ಮ ಸ್ನೇಹ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಹೀಗೆ ಒಬ್ಬರು ನಾಯಕರಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರೆ, ಅದೇ ಸಿನಿಮಾದಲ್ಲಿ ಖಳ ನಾಯಕನಾಗಿ ಮತ್ತೊಬ್ಬ ಸ್ಟಾರ್ ನಟ ಎಂಟ್ರಿ ಕೊಡುತ್ತಾರೆ. ಹೀಗೆ ಒಂದೇ ಸಿನಿಮಾವಾದ ನಾಗರಹಾವಿನಲ್ಲಿ ಶುರುವಾದ ಇವರಿಬ್ಬರ ಸ್ನೇಹ ಪಯಣ ದಿಗ್ಗಜರು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವುದರ ಮಟ್ಟಿಗೆ ಬೆಳೆಯಿತು.

ಇನ್ನು ಅಂಬಿಗೆ ಏನಾದರೂ ತೊಂದರೆಯಾದರೆ ವಿಷ್ಣು ಮುಂದೆ ಇರುತ್ತಿದ್ದರು, ವಿಷ್ಣುಗೆ ಕೊಂಚ ನೋವಾದರೂ ಅಂಬಿ ಸಮಾಧಾನಪಡಿಸುತ್ತಿದ್ದರು. ಆದ್ರೆ ದಿಡೀರ್ ವಿಷ್ಣುವರ್ಧನ್ ಅವರ ಅಗಲಿಕೆಯಿಂದ ಅಂಬರೀಶ್ ಅವರ ಮನಸ್ಸು ಎಷ್ಟರಮಟ್ಟಿಗೆ ನೋವಾಗಿತ್ತು ಎಂಬುದನ್ನು ನಾವು ಆ ಕರಾಳ ದಿನದಂದು ಅಂಬಿ ಬಾಯಿಂದ ಬಂದಂತಹ ಮಾತುಗಳಿಂದ ಆಲಿಸಬಹುದು. ಅಷ್ಟಕ್ಕೂ ಆ ದಿನದಂದು ಅಂಬಿ ಹೇಳಿದ್ದಾದರೂ ಏನು ಎಂಬ ಎಲ್ಲ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ವಿಷ್ಣು ಎಲ್ಲೆ ಹೋದರೂ ಬಾಡಿಗಾರ್ಡ್ನಂತೆ ಅಂಬರೀಶ್ ಅವರನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಿದ್ದರು. ಹೀಗಿರುವಾಗ ವಿಷ್ಣು ನಮ್ಮೆಲ್ಲರಿಂದ ಅಗಲಿದ ಆ ದಿನ ಇಡೀ ಕರುನಾಡಿಗೆ ಕರುನಾಡೆ ಶೋಕ ಸಾಗರದಿಂದ ಮುಳುಗಿತ್ತು. ನನ್ನನ್ನು ಅಂಬರೀಶ್ ಅವರ ಜೊತೆಯಲ್ಲಿ ಕರೆದುಕೊಂಡು ಅಭಿನವ್ ಸ್ಟುಡಿಯೋವರೆಗೂ ನನಗೆ ಧೈರ್ಯ ತುಂಬುತ್ತಾ ಕರೆದುಕೊಂಡು ಬಂದರು.

ಆದರೆ ಅಲ್ಲಿಗೆ ಬಂದ ತಕ್ಷಣ ವಿಷ್ಣುವರ್ಧನ್ ನೋಡಿದ ಅಂಬಿಗೆ ತನ್ನೊಳಗೆ ಇದ್ದಂತಹ ದುಃಖವನ್ನು ತಡೆದುಕೊಳ್ಳಲು ಆಗಲಿಲ್ಲ. ಒಂದೇ ಸಮನೆ ಕಣ್ಣಿರು ಹಾಕುತ್ತಾ ಏನೋ ನನ್ನ ಬಿಟ್ಟು ಹೋಗ್ತಿಯನೋ ನೀನು? ನಡಿ ನಾನು ನಿನ್ನ ಜೊತೆ ಬರ್ತೀನಿ ನಿನ್ನನ್ನು ಬಿಟ್ಟಿರಲು ನನಗಾಗುವುದಿಲ್ಲ ಕಣೋ ಎಂದು ಅಂಬಿ ಎದೆಬಡಿದುಕೊಂಡು ಅಳಲು ಶುರುಮಾಡಿದರಂತೆ. ಈ ಮಾತನ್ನು ಸಂದರ್ಶನವೊಂದರಲ್ಲಿ ಸಾಧುಕೋಕಿಲ ಹೇಳುತ್ತಾ ಭಾವುಕರಾಗಿದ್ದಾರೆ.

Ambarish, beautiful words about Vishnuvardhan

Leave a comment