Darshan-Vishnuvardhan: ವಿಷ್ಣುದಾದಾನಿಗಾಗಿ ಅದೊಂದು ಕೆಲಸವನ್ನು ಡಿ ಬಾಸ್ ಯಾಕೆ ಮಾಡಲಿಲ್ಲ?? ಇಂತಹ ಸಣ್ಣಪುಟ್ಟ ವಿಚಾರಗಳೇ ಸ್ಟಾರ್ ವಾರ್ ಕ್ರಿಯೇಟ್ ಮಾಡಿ ಬಿಡ್ತಾ?
ಹೀಗಿರುವಾಗ ಅಣ್ಣಾವ್ರಿಗೆ ಸಿಕ್ಕಂತಹ ಗೌರವ ವಿಷ್ಣುದಾದಾನಿಗೆ ಸಿಗಲಿಲ್ಲವೆಂಬುದು ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಕಾಡುತ್ತಿರುವಂತಹ ನೋವು.
Darshan-Vishnuvardhan: ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗವನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುವಲ್ಲಿ ಡಾಕ್ಟರ್ ರಾಜಕುಮಾರ್, ಡಾಕ್ಟರ್ ವಿಷ್ಣುವರ್ಧನ್ ಮತ್ತು ಶಂಕರ್ ನಾಗ್ ಅವರ ಪಾತ್ರ ಅಧಿಕವಾದದ್ದು ಈ ಮೂರು ಜನರು, ಮೂರು ದಿಗ್ಗಜರ ಸ್ಥಾನದಲ್ಲಿ ನಿಂತು ಕನ್ನಡಿಗರ ಮನಸ್ಸನ್ನು ಗೆದ್ದವರು. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಅಣ್ಣಾವ್ರಂತೆಯೇ ಅಭಿನಯ ಭಾರ್ಗವರಾಗಿದ್ದಂತಹ ವಿಷ್ಣುವರ್ಧನ್ ಕೂಡ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಳರಾಗಿದ್ದರು.
ಹೀಗಿರುವಾಗ ಅಣ್ಣಾವ್ರಿಗೆ ಸಿಕ್ಕಂತಹ ಗೌರವ ವಿಷ್ಣುದಾದಾನಿಗೆ ಸಿಗಲಿಲ್ಲವೆಂಬುದು ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಕಾಡುತ್ತಿರುವಂತಹ ನೋವು. ಆದರೆ ಅದೊಂದು ದಿನ ಎಲ್ಲ ನಟರು ವಿಷ್ಣು ಪರ ನಿಂತರೇ ಡಿ ಬಾಸ್ ದರ್ಶನ್ ಮಾತ್ರ ಅದೊಂದು ಕೆಲಸವನ್ನು ಮಾಡಲೇ ಇಲ್ಲ. ಇದರ ಹಿಂದಿನ ಅಸಲಿ ಸತ್ಯವೇನು??
ಎಲ್ಲರ ಸಹಾಯಕ್ಕೂ ಮುಂಚೂಣಿಯಲ್ಲಿರುವಂತಹ ದರ್ಶನ್ ವಿಷ್ಣುದಾದನಿಗೆ ಸಹಾಯ ಮಾಡದಿರಲು ಕಾರಣವಾದರೂ ಏನು ಎಂಬ ಎಲ್ಲಾ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ. ಹೌದು ಸ್ನೇಹಿತರೆ ವಿಜಯ ರಂಗರಾಜು ಎಂಬ 8ನೇ ಎಂಜಲು ಯಾವಾಗ ನಮ್ಮ ವಿಜಯ ರಾಜೇಂದ್ರ ಬಹದ್ದೂರ್
ಆದಂತಹ ವಿಷ್ಣುವರ್ಧನ್ ಅವರ ಕುರಿತು ಕಚಪಚ ಎಂದು ತನ್ನ ಎಂಜಲು ಬಾಯಿಯಲ್ಲಿ ಇಲ್ಲಸಲ್ಲದ್ದನ್ನೆಲ್ಲ ಹೇಳುವಾಗ ಕನ್ನಡದ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಪುನೀತ್ ರಾಜಕುಮಾರ್ ಸೇರಿದಂತೆ ಸಾಕಷ್ಟು ಜನರು ವಿಷ್ಣುವರ್ಧನ್ ಕುರಿತು ಧ್ವನಿ ಎತ್ತಿದ್ದರು. ಅಲ್ಲದೆ ಅವರೆಲ್ಲರೂ ಒಟ್ಟಿಗೆ ಸೇರಿ ದುಡ್ಡಿನ ಆಸೆಗೆ ಇಲ್ಲಸಲ್ಲದ್ದನೆಲ್ಲ ಹೇಳುವ ವಿಜಯರಂಗ ರಾಜು ಮೈ ಬೆವರಿಳಿಸಿದರು.
ಹೇಗೆ ಕನ್ನಡದ ಎಲ್ಲಾ ಸ್ಟಾರ್ ನಟ ನಟಿಯರು ಕೂಡ ತಮ್ಮ ಇನ್ಸ್ಟಾಗ್ರಾಂ, ಟ್ವಿಟರ್ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾದಲ್ಲಿ ವಿಷ್ಣುವರ್ಧನ್ರವರ ಕುರಿತು ಅತ್ಯದ್ಭುತವಾದ ಮಾತುಗಳನ್ನಾಡಿದರೆ, ಯಜಮಾನ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡು ಜಾತ್ರಾಮಹೋತ್ಸವವನ್ನೇ ಮಾಡಿದ ಡಿ ಬಾಸ್ ದರ್ಶನ್ ಮಾತ್ರ ತುಟಿಪಿಟಕ್ ಎನ್ನಲಿಲ್ಲ. ಇದು ಇಂದಿಗೂ ಕೂಡ ವಿಷ್ಣು ಮತ್ತು ದಚ್ಚು ಅಭಿಮಾನಿಗಳಲ್ಲಿ ಮೂಡಿರುವಂತಹ ಮನಸ್ತಾಪ ಎಂದರೆ ತಪ್ಪಾಗಲಾರದು.
Unknown facts about Darshan and Vishnuvardhan