Narendra Modi: ಸುಮಾರು 32 ವರ್ಷಗಳ ಹಿಂದೆ ಪ್ರಧಾನಿ ಮೋದಿ ರಾಮ ಮಂದಿರಕ್ಕೆ ಮಾಡಿದ ಒಂದು ಪ್ರತಿಜ್ಞೆ ಈಗ ವೈರಲ್ ಆಗುತ್ತಿದೆ ಏನದು??
ರಾಮ ಮಂದಿರದ ನಿರ್ಮಾಣದ ಕನಸು ಪ್ರತಿಯೊಬ್ಬ ಹಿಂದೂವಿನ ಮನಸಲ್ಲಿ ಇತ್ತು. ಅದಕ್ಕೆ ಹಲವಾರು ಜನರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ.
Narendra Modi: ಇದೆ ಬರುವ ಜನವರಿ 22 ರಂದು ಶ್ರೀ ರಾಮನ ಪ್ರಾಣಪ್ರತಿಷ್ಠೆ ಆಗುತ್ತಿದೆ. ಹಲವಾರು ವರುಷಗಳ ಹೋರಾಟದ ಹಾದಿಯ ಬಗ್ಗೆ ಈಗ ಹಲವಾರು ಬಗೆಯ ಚರ್ಚೆಗಳು ಆಗುತ್ತಿವೆ . ಪ್ರಾಣ ಪ್ರತಿಷ್ಠೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಾ ಇದ್ದರೆ. ಇದರ ಬಗ್ಗೆ ಹಲವಾರು ಚರ್ಚೆಗಳು ಸಹ ಆಗುತ್ತಿವೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣ ಮತ್ತು ಈ ಹಿಂದಿನ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದರು . ಇಡೀ ದೇಶ ಸಂಕ್ರಾಂತಿಯ ಸಂಭ್ರಮದಲ್ಲಿ ಇದ್ದಾಗ ಏಕತಾ ಯತೆಯಲ್ಲಿ ಭಾಗವಹಿಸಿದ ಸಮಯದಲ್ಲಿ ಮೋದಿ ಮಾಡಿದ ಪ್ರತಿಜ್ಞೆ ಏನೆಂಬುದು ಬಹಳ ಕುತೂಹಲ ಮೂಡಿಸುತ್ತದೆ.
ಏಕತಾ ಯಾತ್ರೆಯ ಹಿನ್ನೆಲೆ ಏನು ? (Narendra Modi)
ಮುರಳಿ ಮನೋಹರ ಜೋಶಿ ಅವರು ಮತ್ತು ಅವರ ಸಂಗಡಿಗರು ನಡೆಸಿದ ಯಾತ್ರೆಯೆ ಏಕತಾ ಯಾತ್ರೆ ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ನಡೆಸಿದ ಯಾತ್ರೆ ಕಾಶ್ಮೀರ ಭಯೋತ್ಪಾದನೆಯಲ್ಲಿ ಗುರುತಿಸಿಕೊಂಡ ಕಾಲದಲ್ಲಿ ನಡೆಸಿದ ಯಾತ್ರೆ ಇದಾಗಿತ್ತು. ಭಾರತದ ವಿಭಜನೆಯ ಬಗ್ಗೆ ಮತ್ತು ಭಯೋತ್ಪಾದನೆಯ ಬಗ್ಗೆ ವಿರೋಧವಾಗಿ ನಾವಿದ್ದೇವೆ ಎಂಬದನ್ನು ತಿಳಿಸಲು ಈ ಯಾತ್ರೆಯನ್ನು ಕೈಕೊಂಡಿದ್ದರು . 14 ರಾಜ್ಯಗಳನ್ನು ಸುತ್ತಿ ಶ್ರೀನಗರದ ಲಾಲ್ ಚೌಕ್ನಲ್ಲಿ ಜನವರಿ 26, 1992 ( ಗಣರಾಜ್ಯೋತ್ಸವ) ದಿನ ತ್ರಿವರ್ಣ ಧ್ವಜವನ್ನು ಹಾರಿಸುವಲ್ಲಿ ಕೊನೆಗೊಂಡಿತು.
On this exact day, 32 years ago, @narendramodi arrived at the #AyodhyaRamTemple. He was on a Yatra to spread the message of unity from Kanyakumari to Kashmir, the Ekta Yatra.
Amidst chants of 'Jai Shri Ram', Narendra Modi vowed to return only when the Ram Temple was built.
The… pic.twitter.com/nbLxkTFN9V
— Modi Archive (@modiarchive) January 14, 2024
ಮೋದಿ ಕೈಗೊಂಡ ಪ್ರತಿಜ್ಞೆ ಏನು ?
ರಾಮ ಮಂದಿರದ ನಿರ್ಮಾಣದ ಕನಸು ಪ್ರತಿಯೊಬ್ಬ ಹಿಂದೂವಿನ ಮನಸಲ್ಲಿ ಇತ್ತು. ಅದಕ್ಕೆ ಹಲವಾರು ಜನರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಎಲ್ಲರ ಆಸೆಯಂತೆ ನರೇಂದ್ರ ಮೋದಿ ಅವರಿಗೆ ಸಹ ರಾಮ ಮಂದಿರ ನಿರ್ಮಾಣ ವಾಗಬೇಕು ಎಂಬ ಕನಸು ಕಂಡಿದ್ದರು . ಅವರು ಪಟ್ಟ ಶ್ರಮ ಮತ್ತು ಭಾರತೀಯರು ಅವರಿಗೆ ನೀಡಿದ ಸಹಕಾರದಿಂದ ಇಂದು ರಾಮ ಮಂದಿರ ನಿರ್ಮಾಣವಾಗಿದೆ. ಆದರೆ ಇದರ ಹಿಂದೆ ಅವರು ಒಂದು ಪ್ರತಿಜ್ಞೆ ಮಾಡಿದ್ದರು.
ಅದು 32ವರುಷಗಳ ಹಿಂದಿನ ಘಟನೆ ಸಂಕ್ರಾಂತಿಯ ದಿನವೇ ಮೋದಿ ಅವರು ಹಿಂದೆ ಇದ್ದ ಪುಟ್ಟ ರಾಮ ಮಂದಿರಕ್ಕೆ ಬಂದಿದ್ದರು. ಆಗ ಅಲ್ಲಿ ಮಂದಿರ ಇರಲಿಲ್ಲ. ಹಿಂದೂಗಳ ಏಕತೆಯನ್ನು ತಿಳಿಸಲು ಏಕತಾ ಯಾತ್ರೆ ಕೈಗೊಂಡು ಆ ಯಾತ್ರೆಯಲ್ಲಿ ಜೈ ಶ್ರೀ ರಾಮ್ ಎಂಬ ಘೋಷಣೆ ಕೂಗಿದ್ದು , ಅಲ್ಲಿ ಅವರು ಮಂದಿರ ನಿರ್ಮಾಣ ಆಗುವ ವರೆಗೆ ಈ ಸ್ಥಳಕ್ಕೆ ಮತ್ತೆಂದೂ ಭೇಟಿ ನೀಡುವುದಿಲ್ಲ ಎಂದು ಧೃಢ ಸಂಕಲ್ಪ ಮಾಡಿದ್ದರು.
A pledge made by Prime Minister Modi to the Ram Mandir almost 32 years ago.
ಓದಲು ಹೆಚ್ಚಿನ ಸುದ್ದಿಗಳು: