Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Loan For Street Vendors: ಬೀದಿ ಬದಿ ವ್ಯಾಪಾರ ಮಾಡುವವರಿಗೆ ಕೇಂದ್ರ ಸರ್ಕಾರದಿಂದ 50000/- ಇಂದೆ ಈ ಯೋಜನೆಯ ಲಾಭ ಪಡೆಯಿರಿ!  ಅರ್ಜಿ ಈ ರೀತಿ ಸಲ್ಲಿಸಿ.

ಬೀದಿ ಬಳಿ ವ್ಯಾಪಾರಗಳನ್ನು ಮಾಡಿಕೊಂಡು ಬಹಳ ಕಷ್ಟದಿಂದ ಜೀವನ ನಡೆಸುತ್ತಿರುವ ಅನೇಕ ಬಡವರಿಗೆ, ಹಾಗೂ ಬಡತನ ರೇಖೆಗಿಂತ ಕಡಿಮೆ ಇರುವ ಜನರಿಗೆ ಇದೀಗ ಮೋದಿ ಸರ್ಕಾರವು

Loan For Street Vendors: ಕೇಂದ್ರ ಸರ್ಕಾರವು ಮತ್ತು ರಾಜ್ಯ ಸರ್ಕಾರವು (Central and State Government) ದೇಶದ ಜನರ ಕಷ್ಟಗಳನ್ನು ನಿವಾರಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಈ ಯೋಜನೆಗಳ ಲಾಭವನ್ನು ಪಡೆದುಕೊಂಡು ಅನೇಕರು ಸ್ವಾವಲಬಿಗಳಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ಇದೀಗ ಬೀದಿ ಬದಿ ತರಕಾರಿ ಹಣ್ಣಗಳನ್ನು ಮಾರಿಕೊಂಡು ವ್ಯಾಪಾರ ಮಾಡುವ ಜನರಿಗೆ ಇದೀಗ ಮೋದಿ ಸರ್ಕಾರವು ಒಂದು ವಿಶೇಷವಾದ ಯೋಜನೆಯನ್ನು ಜಾರಿಗೆ ತರುವ ಮೂಲಕ ಇದೀಗ ಅವರ ಸಹಾಯಕ್ಕೆ ನಿಂತಿದೆ.

ಏನಿದು ಬೀದಿ ಬಳಿ ವ್ಯಾಪಾರ ಮಾಡುವವರಿಗೆ ಯೋಜನೆ ಏನಿದರ ಉ ದ್ದೇಶ.

ಬೀದಿ ಬಳಿ ವ್ಯಾಪಾರಗಳನ್ನು ಮಾಡಿಕೊಂಡು ಬಹಳ ಕಷ್ಟದಿಂದ ಜೀವನ ನಡೆಸುತ್ತಿರುವ ಅನೇಕ ಬಡವರಿಗೆ, ಹಾಗೂ ಬಡತನ ರೇಖೆಗಿಂತ ಕಡಿಮೆ ಇರುವ ಜನರಿಗೆ ಇದೀಗ ಮೋದಿ ಸರ್ಕಾರವು ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಬೀದಿ ಬಳಿ ವ್ಯಾಪಾರ ಮಾಡುವವರಿಗೆ (Street Vendors) ಸುಮಾರು 50000 ರವರಿಗೂ ಸಾಲವನ್ನು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುವುದು.

50000/- from Central Govt for street vendors avail this scheme today! Submit the application like this.
Images are credited to their original sources.

ಹೌದು, ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಯೋಜನೆಯ (Atmanirbhar Bharat Abhiyaan) ಅಡಿಯಲ್ಲಿ ಬೀದಿ ಬಳಿ ವ್ಯಾಪಾರ (Street Vendors) ಮಾಡುವ ಜನರಿಗೆ ಸುಮಾರು 50000 ಸಾಲವನ್ನು (Loan) ನೀಡಲಾಗುವುದು. ಈ ಹಣದ ಮೂಲಕ ಅವರು ಯಾವುದೇ ಹೊಸ ವ್ಯಾಪಾರ (New Business) ಅಥವಾ ಇರುವ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಬಹುದು. ಇನ್ನು ಈ ಸಾಲವನ್ನು ಯಾವುದೇ ಶ್ಯೂರಿಟಿ ಇಲ್ಲದೆ ನೀಡಲಾಗುವುದು.

ಆತ್ಮ ನಿರ್ಭರ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.

ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ ಆತ್ಮ ನಿರ್ಭಾರ ಯೋಜನೆಗೆ ಅರ್ಜಿಗಳನ್ನು ಸಲಿಸಬಹುದು. ಇನ್ನು ಈ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್ (Aadhaar Card), ಬ್ಯಾಂಕ್ ಪಾಸ್ ಬುಕ್ (Bank Passbook), ಹಾಗೂ ನಿಮ್ಮ ರೆಸಿಡೆನ್ಸಿಯಲ್ ಪ್ರೂಫ್ (Residential Proof), ಹಾಗೂ ನೀವು ಮಾಡುವ ವ್ಯಾಪಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು.

50000/- from Central Govt for street vendors avail this scheme today! Submit the application like this.
Images are credited to their original sources.

ಆತ್ಮ ನಿರ್ಭರ ಯೋಜನೆಯ ಹಣ ಹೇಗೆ ಕೊಡುತ್ತಾರೆ.

ಈ ಯೋಜನೆಯ ಅಡಿಯಲ್ಲಿ ಸಾಲವನ್ನು ಮೂರು ಕಂತಿನಲ್ಲಿ ನೀಡಲಾಗುತ್ತದೆ (3 Instalments). ಮೊದಲನೆಯ ಕಂತಿನಲ್ಲಿ 10,000 ಹಣವನ್ನು ನೀಡಲಾಗಿದ್ದು, ಮರುಪಾವತಿಗೆ 12 ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಇನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ, ಸಾಲ ತೀರಿಸಿದ ನಂತರ ಎರಡನೇ ಬಾರಿ 20000 ವನ್ನೂ ನೀಡಲಾಗುವುದು, ಹಾಗೂ 18 ತಿಂಗಳ ಮರುಪಾವತಿಯ ಕಾಲಾವಕಾಶವನ್ನು ನೀಡಲಾಗುತ್ತದೆ.

ಈ ಸಾಲವನ್ನು ಸಂಪೂರ್ಣವಾಗಿ ತೀರಿಸಿದ ನಂತರ 50000 ಹಣವನ್ನು ಅತ್ಯಂತ ಕಡಿಮೆ ಬಡ್ಡಿ ದರಕ್ಕೇ ನೀಡಲಾಗುತ್ತದೆ. ಈ ಯೋಜನೆಯ ಲಾಭವನ್ನು ಪಡೆಯಲು ಇಂದೆ ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ, ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ. https://aatmanirbharbharat.mygov.in/

50000/- from Central Govt for street vendors avail this scheme today! Submit the application like this.

Gruha Lakshmi Money: ಗೃಹಲಕ್ಷ್ಮೀ ಯೋಜನೆಯ ಹಣ ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ! ಮಾಹಿತಿ ನೀಡಿದ ಸಿ ಎಂ ಸಿದ್ದರಾಮಯ್ಯ!

 

Leave a comment