Annabhagya Money: ಆಗಸ್ಟ್ ತಿಂಗಳ ಅಕ್ಕಿಯ ಹಣ ಖಾತೆಗೆ ಜಮಾ ಆಗಿದ್ದರೆ ಸರಿ, ಇಲ್ಲವಾದರೆ ಈ ರೀತಿ ಎಲ್ಲವೂ ಸರಿ ಇದೆಯಾ ಎಂದು ನೋಡಿಕೊಳ್ಳಿ.
Annabhagya Money: ಸರ್ಕಾರವು ನೀಡುವ ಅಕ್ಕಿಯ ಬದಲಾಗಿ ಅಕ್ಕಿ ಹಣವನ್ನು ಎಲ್ಲಾ ರೇಷನ್ ಕಾರ್ಡ್ ಹೊಂದಿರುವ ಪಡಿತರ ಚೀಟಿಗೆ ವರ್ಗಾವಣೆ ಮಾಡುತ್ತಿದೆ. ಆದರೆ ಆಗಸ್ಟ್ ತಿಂಗಳಿನಲ್ಲಿ ಕೆಲವರ ಚೀಟಿಗೆ ಹಣ ವರ್ಗಾವಣೆ ಆಗಿದ್ದರೆ ಇನ್ನೂ ಕೆಲವರ ಪಡಿತರ ಚೀಟಿಗೆ ಹಣ ವರ್ಗಾವಣೆ ಆಗಿಲ್ಲ.
ಅನ್ನಭಾಗ್ಯದ ಯೋಜನೆ ಅಡಿಯಲ್ಲಿ 5 ಕೆ.ಜಿ ಅಕ್ಕಿಯ ಹಣ ಒಬ್ಬ ವ್ಯಕ್ತಿಗೆ 170 ರಂತೆ ನೀವು ಜುಲೈ ತಿಂಗಳಲ್ಲಿ ತೆಗೆದುಕೊಂಡಿದ್ದರೆ ಆಗಸ್ಟ್ ತಿಂಗಳಿನಲ್ಲಿ ಏಕೆ ಬರಲಿಲ್ಲ ಮತ್ತು ಹಣ ಬರುವುದಕ್ಕೆ ಏನು ಮಾಡಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿಯಿರಿ.
ಅನ್ನಭಾಗ್ಯ ಯೋಜನೆಯ ಅಡಿ ಬಿಪಿಎಲ್ ಕಾರ್ಡ್(BPL Card) ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಗಳಿಗೆ ಅನ್ನಭಾಗ್ಯದ ಆಗಸ್ಟ್ ತಿಂಗಳಿನ ಹಣ ವರ್ಗಾವಣೆ ಆಗುತ್ತಿದ್ದು 3.3 ಕೋಟಿ ಜನರಿಗೆ 609 ಕೋಟಿ ರೂಪಾಯಿಗಳು ಜಮಾವಣೆ ಆಗಿದೆ.
ಆಗಸ್ಟ್ ತಿಂಗಳಿನಲ್ಲಿ ಒಟ್ಟು 25 ಲಕ್ಷ ಫಲಾನು ಬವಿಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗಿದ್ದು ಮತ್ತು ಬ್ಯಾಂಕ್ ಖಾತೆ ಕುಟುಂಬದ ಯಜಮಾನ ಹೆಸರಲ್ಲಿ ಇಲ್ಲದಿರುವುದು ಮತ್ತು ಬ್ಯಾಂಕ್ ಖಾತೆಗೆ ಕುಟುಂಬದ ಯಜಮಾನಿಯನ್ನು ಜೋಡಣೆ ಮಾಡದೇ ಇರುವುದು ಮತ್ತು ನಿಮ್ಮ ರೇಷನ್ ಕಾರ್ಡ್ ಗೆ.
ಕೆವೈಸಿ(KYC) ಮಾಡಿಸದೆ ಇರುವುದು ಸೇರಿ ಸುಮಾರು 22 ಲಕ್ಷ ಬಿಪಿಎಲ್ ಕಾರ್ಡ್ ಗಳು ಯೋಜನೆಯಿಂದ ಹೊರಗೆ ಉಳಿದುಕೊಂಡಿದ್ದವು. ಈ ಎಲ್ಲಾ ಕಾರ್ಡ್ಗಳು ಆಹಾರ ಇಲಾಖೆಯ ಮುತುವರ್ಜಿಯಿಂದ ಬಗೆಹರಿದಿದ್ದು ಆಗಸ್ಟ್ ತಿಂಗಳಿನಲ್ಲಿ 25 ಲಕ್ಷ ಹೊಸ ಫಲಾನುಭವಿಗಳಿಗೆ ಅನ್ನ ಭಾಗ್ಯದ ಸೌಲಭ್ಯ ಸಿಕ್ಕಿದೆ.
ಉಳಿದ 15 ಲಕ್ಷ ಕಾರ್ಡುಗಳ ಸಮಸ್ಯೆಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಗೆಹರಿಸಲು ಆಹಾರ ಇಲಾಖೆ ಕ್ರಮ ಕೈಗೊಂಡಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಕೆಲವು ನಿರ್ಬಂಧನೆಗಳಿಂದ ಸುಮಾರು 8.2 ಲಕ್ಷ ಕಾರ್ಡುಗಳು ಸಿಗದಂತೆ ಆಗಿದೆ.
ಮೂರು ತಿಂಗಳಿನಿಂದ ರೇಶನ್ ಪಡೆಯದೆ ಇರುವ ರೇಷನ್ ಕಾರ್ಡ್ ಗಳನ್ನು ನಗದು ರೇಷನ್ ಕಾರ್ಡ್ ಗಳು ಎಂದು ವಜಾ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 1.82 ಕೋಟಿ ಬಿಪಿಎಲ್ ಕಾರ್ಡ್ ಗಳಿವೆ. ನಿಮಗೇನಾದರೂ ನಿಮ್ಮ ಖಾತೆಗೆ ಆಗಸ್ಟ್ ಮತ್ತು ಜುಲೈ ತಿಂಗಳ ಹಣ ವರ್ಗಾವಣೆ ಆಗಿಲ್ಲ ಎಂದರೆ.
ನೀವು ನಿಮ್ಮ ಆದರ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ಗೆ NPCI ಮಾಡಿಸಬೇಕು. ಒಂದು ವೇಳೆ ನಿಮ್ಮ ಖಾತೆಗೆ ಹಣ ಇನ್ನೂ ಜಮಾವಣೆ ಆಗದಿದ್ದರೆ ಜುಲೈ ಮತ್ತು ಆಗಸ್ಟ್ ತಿಂಗಳ ಹಣ ನಿಮ್ಮ ಖಾತೆಗೆ ಬರುವ ತನಕ ನೀವು ಸ್ವಲ್ಪ ದಿನಗಳ ಕಾಲ ಕಾಯಬೇಕಾಗಿರುತ್ತದೆ.
ಇಷ್ಟೇ ಅಲ್ಲದ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ನಿಮ್ಮ ರೇಷನ್ ಕಾರ್ಡ್ ಗೆ ಮತ್ತು ನಿಮ್ಮ ರೇಷನ್ ಕಾರ್ಡ್ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಮಾಡಿಸಿರಬೇಕಾಗುತ್ತದೆ ಕಡ್ಡಾಯವಾಗಿ ಜೊತೆಗೆ ಸೆಪ್ಟೆಂಬರ್ 1 ರಿಂದ 10 ತನಕ ರೇಷನ್ ಕಾರ್ಡ್ ತಿದ್ದುಪಡಿ ಆಯೋಗ ಶುರುವಾಗಿದ್ದು ಎಲ್ಲಾ ಸೈಬರ್ ಸೆಂಟರ್ ಗಳಲ್ಲಿ ಅಪ್ಡೇಟ್ ಮಾಡಿಸಿಕೊಳ್ಳಬಹುದು….