ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಹಣ ಕಟ್ಟುತ್ತಿರುವವರು ತಪ್ಪದೆ ನೋಡಿ.
Sukanya Samriddhi Yojana: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಸುಕನ್ಯ ಸಮೃದ್ಧಿ ಯೋಜನೆ ಯಲ್ಲಿ ಬಹಳ ದೊಡ್ಡ ಬದಲಾವಣೆ ಬಂದಿದ್ದು ನಿಮ್ಮ ಮನೆಯಲ್ಲಿ ಏನಾದರೂ ಹೆಣ್ಣು ಮಕ್ಕಳು ಇದ್ದರೆ ನೀವು ತಪ್ಪದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ. ಈಗಾಗಲೇ ನೀವೇನಾದರೂ ನಿಮ್ಮ ಮಗಳಿಗೆ ಸುಕನ್ಯ ಯೋಜನೆ ಸಮೃದ್ಧಿಯಲ್ಲಿ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ ಖಾತೆಯನ್ನು ಮಾಡಿಸಿದ್ದರೆ ಈ ಯೋಜನೆಗೆ ನೀವೇನಾದರೂ ನೋಂದಾಯಿಸಿಕೊಂಡಿದ್ದರೆ.
ಮತ್ತೆ ಈ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು ಆದರೆ ಈಗ ಈ ಯೋಜನೆಯಲ್ಲಿ ಸರ್ಕಾರವು ಬಾರಿ ದೊಡ್ಡ ಬದಲಾವಣೆಯನ್ನು ಮಾಡಿ ಆದೇಶ ಹೊರಡಿಸಲಾಗಿದೆ. ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿಯವರು ಭೇಟಿ ಬಡವೋ ಭೇಟಿ ಬಚಾವೋ(Beti Bachao Beti Padhao) ಯೋಜನೆ ಅಡಿಯಲ್ಲಿ ಈ ಸುಕನ್ಯಾ ಯೋಜನೆಯನ್ನು ಜಾರಿಗೊಳಿಸಿದ್ದಾರೆ.
ಈಗಾಗಲೇ ಸಾಕಷ್ಟು ಪೋಷಕರು, ಮಗಳ ಹೆಸರಿನಲ್ಲಿ ತಿಂಗಳಿಗೆ ಅಥವಾ ವರ್ಷಕ್ಕೆ ಹಣವನ್ನು ಕಟ್ಟುತ್ತಾ ಬಂದಿರುತ್ತಾರೆ ಕೇಂದ್ರ ಸರ್ಕಾರವು ವಿವಿಧ ರೀತಿಯ ಯೋಜನೆಗಳನ್ನು ನೀಡುತ್ತದೆ. ಇವು ಸಣ್ಣ ಉಳಿತಾಯ ಯೋಜನೆಗಳ ರೂಪದಲ್ಲಿ ಸಾರ್ವಜನಿಕರಿಗೆ ಲಭ್ಯವಿದೆ. ನೀವು ಇವುಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಆದಾಯವನ್ನು ಕೂಡ ಪಡೆಯಬಹುದಾಗಿದೆ. ನೀವು ನೋಡಿರುವ ಎಲ್ಲ ಯೋಜನೆಗಳಲ್ಲಿ ಸುಕನ್ಯ ಸಂಯೋಗ ಯೋಜನೆ ದೊಡ್ಡ ಮಟ್ಟದಲ್ಲಿ ಮತ್ತು ಮೊದಲ ಸ್ಥಾನದಲ್ಲಿ ಇದೆ ಎಂದು ಹೇಳಬಹುದಾಗಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ನಂತರ ಸುಕನ್ಯಾ ಸಮೃದ್ಧಿ ಯೋಜನೆ ಅತ್ಯಂತ ಬಡ್ಡಿ ದರ ಯೋಜನೆಯನ್ನು ಹೊಂದಿದೆ. ನೀವು ಈ ಯೋಜನೆಗೆ ಸೇರಿದರೆ ಶೇಖಡ 8% ರಷ್ಟು ಬಡ್ಡಿದರವನ್ನು ಪಡೆಯುತ್ತೀರಿ. ನೀವು ಅಂಚೆ ಕಚೇರಿ ಅಥವಾ ಬ್ಯಾಂಕಿಗೆ ಹೋಗಿ ಯೋಜನೆಯನ್ನು ಪಡೆಯಬಹುದು. ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರು ಯೋಜನೆಗೆ ಸೇರಿಕೊಳ್ಳಬಹುದು.
ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳು ಈ ಯೋಜನೆಗೆ ಅರ್ಹರಾಗಬಹುದು ಅಥವಾ ಮೂವರು ಅವಳಿ ಮಕ್ಕಳು ಇದ್ದರೆ ಈ ಯೋಜನೆಗೆ ಸೇರಬಹುದು.
ಹುಡುಗಿಯರ ಜೀವನವನ್ನು ಭದ್ರಪಡಿಸುವವರು ಇಷ್ಟಪಡುವವರು ಸುಕನ್ಯ ಖಾತೆಯನ್ನು ತೆರೆಯಬಹುದು. ನೀವು ಈ ಖಾತೆಯನ್ನು 250 ರೂ ಗಳಲ್ಲಿ ತೆರೆಯಬಹುದಾಗಿದೆ. ಒಂದು ವರ್ಷದಲ್ಲಿ ನೀವು ಒಂದುವರೆ ಲಕ್ಷಗಳ ತನಕ ಈ ಖಾತೆಯಲ್ಲಿ ಹಣ ಹೂಡಿಕೆ ಮಾಡಬಹುದು.
ನೀವು ಪ್ರತಿ ತಿಂಗಳು ನಿರ್ದಿಷ್ಟ ಮಟ್ಟದಲ್ಲಿ ಹಣವನ್ನು ಶೇಖರಣೆ ಮಾಡುತ್ತಾ ಹೋದರೆ ಕೊನೆಯ ಸಮಯದಲ್ಲಿ ನಿಮಗೆ ಇಷ್ಟು ಹಣವನ್ನು ಪಡೆಯಬಹುದು ಎಂದು ನೀವು ಅಂದಾಜು ಮಾಡಬಹುದಾಗಿದೆ. ಖಾತೆಯನ್ನು ತೆರೆದ ದಿನಾಂಕದಿಂದ 15 ವರ್ಷಗಳ ಅವಧಿಯವರೆಗೆ ಹಣವನ್ನು ಹೂಡಿಕೆ ಮಾಡಬೇಕು. ಯೋಜನೆಯ ಮೆಚುರಿಟಿ ಅವಧಿ 21 ವರ್ಷಗಳು. .
ಆದರೆ ಹುಡುಗಿ 18 ವರ್ಷ ಆದ ಬಳಿಕ ಅವಳು ಶೇಕಡ 50ರಷ್ಟು ಮೊತ್ತವನ್ನು ಪಡೆಯಬಹುದು. 21 ವರ್ಷ ಆದ ನಂತರ ನೀವು ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ನೀವು ಹೂಡಿಕೆ ಮಾಡುವ ಹಣವನ್ನು ವರ್ಗಾಯಿಸಿ ನಿಮ್ಮ ಆದಾಯದ ಮೊತ್ತವು ಬದಲಾಗುತ್ತದೆ. ಕೇಂದ್ರ ಸರ್ಕಾರವು ಪ್ರತಿ ವರ್ಷಗಳಿಗೊಮ್ಮೆ ಬಡ್ಡಿ ದರವನ್ನು ಪರಿಶೀಲಿಸುತ್ತದೆ.
ಯೋಜನೆಗಳಲ್ಲಿ ನೀವು ಹೂಡಿಕೆ ಮಾಡುವುದರ ಮೂಲಕ ತೆರಿಗೆ ಪ್ರಯೋಜನಗಳನ್ನು ಕೂಡ ನೀವು ಪಡೆಯಬಹುದು. ಸುಕನ್ಯ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡುವವರು ಆಧಾರ್ ಕಾರ್ಡ್ ಹೊಂದಿರಬೇಕಾಗುತ್ತದೆ. ನೀವು ಖಾತೆ ತೆಗೆದ ಆರು ತಿಂಗಳ ಒಳಗೆ ಈ ಕೆಲಸವನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ ನೀವು ತೆಗೆದಿರುವ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ.
ನೀವು ಖಾತೆ ತೆಗೆಯುವ ಸಮಯದಲ್ಲಿ ಆಧಾರ್ ಕಾರ್ಡ್ ಒದಗಿಸಿದರೆ ಯಾವುದೇ ರೀತಿಯ ಸಮಸ್ಯೆ ಕಂಡು ಬರುವುದಿಲ್ಲ. ನೀವು ಖಾತೆ ತೆಗೆದ ಎರಡು ತಿಂಗಳ ಒಳಗಾಗಿ ಪಾನ್ ಕಾರ್ಡ್ ಕೂಡ ನೀಡಬೇಕಾಗುತ್ತದೆ….