Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

TTD Tickets: ತಿರುಪತಿ ತಿರುಮಲದಲ್ಲಿ ಶ್ರೀವಾರಿ ಅರ್ಜಿತಾ ಸೇವೆಗೆ ಟಿಕೆಟ್ ಪ್ರಾರಂಭವಾಗಿದೆ, ಆನ್ಲೈನ್ ನಲ್ಲಿ ಈ ರೀತಿ ಟಿಕೆಟ್ ಬುಕ್ ಮಾಡಿಕೊಳ್ಳಿ, ಇನ್ನು 2 ದಿನ ಅಷ್ಟೇ ಬಾಕಿ ಇರೋದು. 

TTD Tickets: Tickets for Srivari Arjita Seva at Tirupati Tirumala have started, book tickets online like this, only 2 days left.

TTD Tickets: ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳಲ್ಲಿ, ತಿರುಪತಿ ದೇವಸ್ಥಾನ(Tirumala Tirupati Devasthanam)ಸಹ ಒಂದು ಎಂದರೆ ತಪ್ಪಾಗುವುದಿಲ್ಲ. ತಿರುಪತಿಯ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಭಕ್ತಾಧಿಗಳು ಲಕ್ಷಗಳಲ್ಲಿ ಭೇಟಿ ನೀಡುತ್ತಾರೆ. ದೇವರಲ್ಲಿ ಸೇವೆ ಸಲ್ಲಿಸಲು ಸಾಕಷ್ಟು ಜನ ಇಂದಿಗೂ ಸಹ ಕಾದು ಕುಳಿತಿದ್ದಾರೆ. ಇದೀಗ ಇಂತಹ ಭಕ್ತಾಧಿಗಳಿಗೆ ಒಂದು ಸಿಹಿ ಸುದ್ದಿಯನ್ನು ನೀಡಲಿದ್ದೇವೆ ಹಾಗಾದರೆ ಏನಿದು ಸುದ್ದಿ ತಿಳಿಯಲು ಈ ಪುಟವನ್ನು ಪೂರ್ತಿಯಾಗಿ ಓದಿ…

ತಿರುಪತಿ ಹುಂಡಿ ದುಡ್ಡು ಎಣಿಸುವುದು ನೋಡಿ ಈ ಅದ್ಭುತ ನೋಡೋಕೆ ಎರಡು ಕಣ್ಣು ಸಾಲದು..!!

ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ (ಟಿಟಿಡಿ) ಇದೀಗ ಅಕ್ಟೋಬರ್ ತಿಂಗಳ ವೆಂಕಟೇಶ್ವರ ಸ್ವಾಮಿಯ ಆರ್ಜಿತ ಸೇವಾ ಟಿಕೆಟ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದೆ. ಇದರಲ್ಲಿ ಸುಪ್ರಭಾತಂ, ತೋಮಾಲ, ಅರ್ಚನ, ಮತ್ತು ಅಷ್ಟದಳಪಪದಮಾರಾಧನೆಯ ಟಿಕೆಟ್‌ಗಳನ್ನು ಸಹ ಒಳಗೊಂಡಿದೆ.

ತಿರುಪತಿಯಲ್ಲಿ ಹೂ ಕಟ್ಟುವ ಮಹಿಳೆಯರ ಜೊತೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಅವರ ಜೊತೆ ಕುಳಿತು ಸುಧಾಮೂರ್ತಿ ಅಮ್ಮನವರು ಹೂ ಕಟ್ಟುತ್ತಿರುವ ಮಧುರ ಕ್ಷಣಗಳು ಇಲ್ಲಿದೆ ನೋಡಿ! ನಿಜಕ್ಕೂ ಹ್ಯಾಟ್ಸಾಫ್ ಕಂಡ್ರಿ!

ಈ ಸೇವಾ ಟಿಕೆಟ್‌ಗಳನ್ನು ತಮ್ಮದಾಗಿಸಿಕೊಳ್ಳಲು ಭಕ್ತಾಧಿಗಳು ಆನ್‌ಲೈನ್ ಲಕ್ಕಿ ಡಿಪ್‌ನಲ್ಲಿ ಭಾಗವಹಿಸಬೇಕಾಗಿದ್ದು, ಈ ತಿಂಗಳ 20 ರವರೆಗೆ, ಈ ಲಕ್ಕಿ ಡಿಪ್ ನಲ್ಲಿ ಭಾಗವಹಿಸುವ ಅವಕಾಶವಿದೆ.
ಟಿಟಿಡಿ ಅಧಿಕೃತ ವೆಬ್‌ಸೈಟ್ https://online.tirupatibalaji.ap.gov.in/ ಈ ಸೇವಾ ಟಿಕೆಟ್‌ಗಳು ಮತ್ತು ಟೋಕನ್‌ಗಳನ್ನು ಭಕ್ತಾಧಿಗಳು ಬುಕ್ ಮಾಡಬಹುದಾಗಿದೆ.

ಪ್ರತಿದಿನ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಸುಮಾರು 71,000 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇನ್ನು ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ, ಎಲ್ಲಾ ಭಕ್ತರ ದರ್ಶನ ಪೂರ್ಣಗೊಳ್ಳಲು ಸುಮಾರು 6 ಗಂಟೆ ಬೇಕಾಗುತ್ತದೆ ಎನ್ನಲಾಗಿದೆ. ಹೌದು ಸಾವಿರಗಳಲ್ಲಿ ಬರುವ ಎಲ್ಲಾ ಭಕ್ತರ ದರ್ಶನ ಪೂರ್ಣಗೊಳ್ಳಲು ಸುಮಾರು 6 ಗಂಟೆಯ ಸಮಯ ಬೇಕಾಗುತ್ತದೆ.

ತಿರುಪತಿ ಹುಂಡಿ ದುಡ್ಡು ಎಣಿಸುವುದು ನೋಡಿ ಈ ಅದ್ಭುತ ನೋಡೋಕೆ ಎರಡು ಕಣ್ಣು ಸಾಲದು..!!

ಅಕ್ಟೋಬರ್ ತಿಂಗಳಿನಲ್ಲಿ ನಡೆಯುವಂತಹ ಶ್ರೀನಿವಾಸ ಕಲ್ಯಾಣ ಸೇವೆ, ಉಂಜಲ ಸೇವೆ, ಸಹಸ್ರ ದೀಪಾಲಂಕಾರ ನಂತಹ ಸೇವೆಗಳಿಗೆ ಆರ್ಜಿತ ಸೇವಾ ಟಿಕೆಟ್ ಕೋಟಾವನ್ನು ಜುಲೈ 21 ರಂದು ಬಿಡುಗಡೆ ಮಾಡುವುದಾಗಿ ಟಿಟಿಡಿ ಮಾಹಿತಿ ನೀಡಿದೆ. ನಂತರ ಜುಲೈ 24 ರಂದು ಅಕ್ಟೋಬರ್ ತಿಂಗಳ ಅಂಗಪ್ರದಕ್ಷಿಣಾ ಟೋಕನ್ ಅನ್ನು ಬಿಡುಗಡೆ ಮಾಡುತ್ತದೆ ಎನ್ನಲಾಗುತ್ತಿದೆ.

ತಿರುಪತಿಯಲ್ಲಿ ಮಗನ ಹುಟ್ಟುಹಬ್ಬವನ್ನು ಆಚರಿಸಿದ ನಟಿ ಮಯೂರಿ..!! ಹೇಗಿತ್ತು ನೋಡಿ!!

 

Leave a comment