Somvati Amavasya: ಈ ವರ್ಷ ಜುಲೈ 17 ರಂದು ಸೋಮವತಿ ಅಮಾವಾಸ್ಯೆ ಇದ್ದು, ಈ ದಿನ ಈ ಮೂರು ಕೆಲಸಗಳನ್ನು ತಪ್ಪದೆ ಮಾಡಲೇ ಬೇಕು
Specialty of Somvati amavasya
Somvati Amavasya: ನಮ್ಮ ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ರಾತ್ರಿಗೆ ಬಹಳ ದೊಡ್ಡ ಮಹತ್ವ ಇದೆ. ಪ್ರತಿ ತಿಂಗಳಿಗೆ ಒಮ್ಮೆ ಅಮಾವಾಸ್ಯೆ ಬರುತ್ತದೆ, ಇನ್ನು ಅಮಾವಾಸ್ಯೆಯ ರಾತ್ರಿ ಚಂದ್ರನು ಆಕಾಶದಲ್ಲಿ ಕಣ್ಮರೆಯಾಗಿರುತ್ತಾನೆ. ಇನ್ನು ಅಮಾವಾಸ್ಯೆ ಸೋಮವಾರದ ದಿನ ಕಂಡರೆ, ಅದನ್ನು ಸೋಮವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಶ್ರಾವಣ ಮಾಸದ ಪ್ರತಿಯೊಂದು ಹಬ್ವವನ್ನು ವಿಶೇಷ ಎಂದು ಪರಿಗಣಿಸಿಲಾಗುತ್ತದೆ. ಇನ್ನು ಈ ಹಬ್ಬಗಳಿಗೆ ನಮ್ಮ ಧರ್ಮದಲ್ಲಿ ಬಹಳ ದೊಡ್ಡ ಮಹತ್ವವಿದೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯ ದಿನ ಈ ಸೋಮವತಿ ಅಮಾವಾಸ್ಯೆಯ ವ್ರತವನ್ನು ಆಚರಿಸಲಾಗುತ್ತದೆ. ನಮ್ಮ ಹಿಂದೂ ಧರ್ಮದ ಪ್ರಕಾರ ಈ ಸೋಮವತಿ ಅಮಾವಾಸ್ಯೆಯ ವ್ರತವನ್ನು ಆಚರಿಸುವ ಪ್ರತಿಯೊಬ್ಬರ ಎಲ್ಲಾ ಆಸೆ ಆಕಾಂಶೆಗಳು ಪೂರ್ಣಗೊಳ್ಳಲಿದೆ ಎನ್ನುವ ನಂಬಿಕೆ ಇದೆ.
ಇನ್ನು ಈ ವರ್ಷ ಜುಲೈ 17 ರಂದು ಸೋಮವತಿ ಅಮಾವಾಸ್ಯೆ(Somvati Amavasya) ಇದ್ದು, ಈ ದಿನ ಈ ಮೂರು ಕೆಲಸಗಳನ್ನು ಮಾಡುವ ಮೂಲಕ ನೀವು ರಾಹು(Rahu) ಕಾಟದಿಂದ ಮುಕ್ತಿ ಪಡೆಯಬಹುದು. ಹಾಗಾದರೆ ಈ ಮೂರು ಕೆಲಸಗಳು ಯಾವುದು ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತೇವೆ ಬನ್ನಿ..
ಸೋಮವತಿ ಅಮಾವಾಸ್ಯೆಯ ದಿನ ರಾಹುವಿನ ಪ್ರಭಾವ ಹೆಚ್ಚಾಗಿ ಇರುತ್ತದೆ, ಈ ದಿನ ರಾಹುವಿನ ಸ್ತೋತ್ರವನ್ನು(Rahu mantra) ಪಠಿಸುವ ಮೂಲಕ ನಾವು ರಾಹು ಕಾಟದಿಂದ ದೂರವಾಗಬಹುದು. ಅಲ್ಲದೆ ರಾಹು ಸ್ತೋತ್ರವನ್ನು ಪಠಿಸುವುದರಿಂದ ರಾಹು ದೋಷದಿಂದ ಮುಕ್ತರಾಗುವ ಜೊತೆಗೆ ನಮ್ಮ ಎಲ್ಲಾ ನಕಾರಾತ್ಮಕ ಶಕ್ತಿಗಳು ನಮ್ಮನ್ನು ಬಿಟ್ಟು ತೊಲಗುತ್ತದೆ.
Asha Workers: ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ ನೀಡಿದ ಆರೋಗ್ಯ ಸಚಿವ, ಕೈ ತುಂಬಾ ಹಣ ಗಳಿಸುವ ಸಮಯ ಬಂದೆ ಬಿಡ್ತು.
ಇನ್ನು ಸೋಮವತಿ ಅಮಾವಾಸ್ಯೆಯ ದಿನ ಆಲದ ಮರದ(Banyan tree) ಕೆಳಗೆ ಸಾಸಿವೆ ಎಣ್ಣೆಯನ್ನು ಬಳಸಿ ದೀಪವನ್ನು ಹಚ್ಚಬೇಕು. ಇನ್ನು ಈ ದೀಪಕ್ಕೆ ಒಂದು ಲವಂಗವನ್ನು ಸಹ ಸೇರಿಸಬೇಕು, ಈ ರೀತಿ ಮಾಡುವ ಮೂಲಕ ನೀವು ರಾಹು ದೋಷದಿಂದ ಮುಕ್ತರಾಗುತ್ತೀರಿ.
ಇನ್ನು ಸೋಮವತಿ ಅಮಾವಾಸ್ಯೆಯ ದಿನ ಕಪ್ಪು ನಾಯಿಗೆ(black dog) ರೊಟ್ಟಿಯನ್ನು ತಿನ್ನಿಸಿ. ಈ ರೀತಿ ಕಪ್ಪು ನಾಯಿಗೆ ರೊಟ್ಟಿ ತಿನ್ನಿಸುವ ಮೂಲಕ ನಿಮ್ಮ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುವುದರ ಜೊತೆಗೆ ನಿಮ್ಮ ರಾಹು ದೋಷ ಸಹ ನಿಯಂತ್ರಿಸುತ್ತದೆ.
ಶ್ರಾವಣ ಮಾಸದ ಎರಡನೇ ಸೋಮವಾರ ಸೋಮವತಿ ಅಮಾವಾಸ್ಯೆಯ ಲಾಭಗಳು ಬೆಳ್ಳಿಗೆ ಸುಮಾರು 7:58 ಕ್ಕೆ ಪ್ರಾರಂಭವಾಗಲಿದೆ. ಈ ದಿನ ಉಪವಾಸ ಮಾಡುವ ಜೊತೆಗೆ ಪ್ರರಮ ಶಿವನನ್ನು ಆರಾಧಿಸಲಾಗುತ್ತದೆ. ತನ್ನ ಭಕ್ತರ ಭಕ್ತಿಗೆ ಮೆಚ್ಚಿ ಭೋಳಾ ಶಂಕರನು ಅವರು ಕೇಳಿದ ವರಗಳನ್ನು ನೀಡುತ್ತಾನೆ ಎನ್ನುವುದು ನಂಬಿಕೆ.