ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಕೃಪೆ ಇದೆ ಎಂದು ತಿಳಿದುಕೊಳ್ಳಬೇಕಾ ಹಾಗಾದರೆ ಇಲ್ಲಿದೆ ನೋಡಿ ಉಪಾಯ, ಇದರಲ್ಲಿ ಒಂದು ಹೂವನ್ನು ಸೆಲೆಕ್ಟ್ ಮಾಡಿ ಸಾಕು !!
ಪ್ರತಿಯೊಬ್ಬರಿಗೂ ಒಂದೊಂದು ಇಷ್ಟದ ದೇವರು ಇರುತ್ತೆ. ನಾವು ಇಷ್ಟಪಟ್ಟ ದೇವರನ್ನು ನಾವು ಪೂಜಿಸುತ್ತೇವೆ. ದೇವರ ಆಶೀರ್ವಾದ ಪಡೆದುಕೊಳ್ಳಲು ಭಕ್ತಿ ಭಾವದಿಂದ ನಡೆದುಕೊಳ್ಳುತ್ತೇವೆ. ಸ್ನೇಹಿತರೆ ನಿಮ್ಮ ಮೇಲೆ ಯಾವ ದೇವರ ಕೃಪೆ ಇದೆ ಎನ್ನುವುದನ್ನು ಕೂಡಲೇ ತಿಳಿದುಕೊಳ್ಳಬಹುದು ಹೇಗೆ ಅಂತೀರಾ? ನಾವು ಈ ಚಿತ್ರದಲ್ಲಿ ತೋರಿಸಲಾಗಿರುವ ಒಂದು ಹೂವನ್ನು ಆಯ್ಕೆ ಮಾಡಿ. ನಿಮ್ಮ ಆಯ್ಕೆಯ ಅನುಸಾರ ಯಾವ ದೇವರ ಕೃಪೆ ನಿಮ್ಮ ಮೇಲಿರತ್ತೆ ಅನ್ನೋದನ್ನ ನಾವು ತಿಳಿಸಿಕೊಡುತ್ತೇವೆ.
ನೀವು ಮೊದಲನೇ ಹೂವನ್ನು ಆಯ್ಕೆ ಮಾಡಿದ್ದರೆ, ನಿಮ್ಮ ಮೇಲೆ ಆ ಶ್ರೀ ಕೃಷ್ಣನ ದಯೆ ಯಾವಾಗಲೂ ಇದ್ದೇ ಇರುತ್ತೆ ಎಂದು ಅರ್ಥ. ಕಷ್ಟದಲ್ಲಿ ಇರುವಾಗ ಶ್ರೀ ಕೃಷ್ಣ ನಿಮ್ಮ ಕೈ ಹಿಡಿಯುತ್ತಾನೆ ನಿಮಗೆ ಏನೇ ತೊಂದರೆ ಆದರೂ ಶ್ರೀಕೃಷ್ಣನ ನೆನೆಸಿಕೊಂಡರೆ ನಿಮ್ಮ ಕಷ್ಟ ಪರಿಹಾರವಾಗುತ್ತದೆ. ಇನ್ನು ನೀವು ಎರಡನೇ ಹೂವನ್ನು ಆಯ್ಕೆ ಮಾಡಿದ್ದಾರೆ ನಿಮ್ಮ ಮೇಲೆ ಲಕ್ಷ್ಮಿಯ ಕೃಪಾ ಕಟಾಕ್ಷ ಇರುತ್ತೆ ಎಂದು ಅರ್ಥ. ಲಕ್ಷ್ಮಿ ದೇವಿಯನ್ನು ನೀವು ಆರಾಧಿಸಿದರೆ ನಿಮಗೆ ಯಾವ ಆರ್ಥಿಕ ಸಮಸ್ಯೆ ಬರುವುದಿಲ್ಲ ಆಯ್ಕೆ ಮಾಡಿರುವವರ ಜೀವನದಲ್ಲಿ ಆರ್ಥಿಕ ತೊಂದರೆ ಇರುವುದಿಲ್ಲ.
ಇನ್ನು ಮೂರನೇ ಹೂವನ್ನು ನೀವು ಆಯ್ಕೆ ಮಾಡಿದರೆ ಮಹಾದೇವನ ಆಶೀರ್ವಾದಕ್ಕೆ ನೀವು ಪಾತ್ರರಾಗಿದ್ದೀರಿ ಎಂದು ಅರ್ಥ. ನೀವು ಜೀವನದಲ್ಲಿ ಎಷ್ಟೇ ಕಷ್ಟದಲ್ಲಿ ಇದ್ದರೂ ಆ ಶಿವನನ್ನು ನೆನಪಿಸಿಕೊಂಡರೆ ಆ ಕಷ್ಟಗಳೆಲ್ಲವೂ ದೂರವಾಗುತ್ತದೆ ನಿಮ್ಮ ಕಷ್ಟಗಳೆಲ್ಲವನ್ನು ಶಿವ ತನ್ನ ಮೂರನೇ ಕಣ್ಣಿನಿಂದ ಭಸ್ಮ ಮಾಡಿಬಿಡುತ್ತಾನೆ ಎಂದು ಹೇಳಲಾಗುತ್ತದೆ. ಇನ್ನು ನಾಲ್ಕನೇ ಹೂವನ್ನು ನೀವು ಆಯ್ಕೆ ಮಾಡಿಕೊಂಡಿದ್ದರೆ ಸೂರ್ಯದೇವನ ಕೃಪೆ ನಿಮ್ಮ ಮೇಲಿದೆ ಎಂದು ಅರ್ಥ.
ಸೂರ್ಯದೇವನ ಕೃಪೆಯಿಂದ ನಿಮ್ಮಲ್ಲಿ ಹೆಚ್ಚಿನ ತೇಜಸ್ಸು ಇರುತ್ತೆ ಯಾವುದೇ ಸಂದರ್ಭದಲ್ಲಿ ನೀವು ಕುಗ್ಗುವುದಿಲ್ಲ ನಿಮ್ಮ ಮನಸ್ಥಿತಿಯನ್ನು ಗಟ್ಟಿಯಾಗಿ ಇಟ್ಟುಕೊಂಡಿರುತ್ತೀರಿ. ಸೂರ್ಯದೇವನ ಕೃಪೆಯಿಂದಾಗಿ ನೀವು ಸದಾ ಧೈರ್ಯದಿಂದ ಇರುತ್ತೀರಿ ಹಾಗಾಗಿ ಈ ಹೂವನ್ನು ಆಯ್ಕೆ ಮಾಡಿದ ಜನರಿಗೆ ಅತ್ಯಂತ ಕಷ್ಟ ಎನ್ನುವ ಸಂದರ್ಭ ಎದುರಾಗುವುದಿಲ್ಲ. ಹಾಗಾಗಿ ಇವರು ಸದಾ ಜೀವನದಲ್ಲಿ ಖುಷಿಯಾಗಿ ನಗುನಗುತ್ತಾ ಇರುವಂತಹ ಜನ ಎಂದು ಹೇಳಬಹುದು.
ಇನ್ನು ಕೊನೆಯದಾಗಿ ನೀವು ಐದನೇ ಹೂವನ್ನು ಆಯ್ಕೆ ಮಾಡಿದ್ದಾರೆ, ವಿಘ್ನ ನಿವಾರಕ ಗಣೇಶನ ಕೃಪೆ ನಿಮ್ಮ ಮೇಲಿದೆ ಎಂದು ಹೇಳಬಹುದು. ಪ್ರತಿದಿನ ಎದ್ದು ಕೂಡಲೇ ಒಮ್ಮೆ ಗಣೇಶನ ನೆನೆದರೆ ಸಾಕು ಇಡೀ ದಿನ ಆಹ್ಲಾಧಕರವಾಗಿರುತ್ತೆ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಇನ್ನು ಇವರದು ಚುರುಕಾದ ವ್ಯಕ್ತಿತ್ವ ಯಾವುದೇ ಕೆಲಸವನ್ನು ಕೊಟ್ಟರು ಬಹಳ ಚುರುಕಾಗಿ ವೇಗವಾಗಿ ಮಾಡಿ ಮುಗಿಸುತ್ತಾರೆ. ಸ್ನೇಹಿತರೆ ಈ ಐದು ಹೂವುಗಳಲ್ಲಿ ನಿಮ್ಮ ಆಯ್ಕೆ ಯಾವುದು ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.