ಚಾಣಕ್ಯ ಹೇಳಿರುವ ಶ್ರೀಮಂತರ ಗುಟ್ಟು, ಈ ನಿಯಮವನ್ನು ಪಾಲಿಸಿದರೆ ನಿಮ್ಮ ಬಡತನ ಓಡಿ ಹೋಗುತ್ತದೆ, ಶ್ರೀಮಂತರು ಏನೆಲ್ಲಾ ಮಾಡ್ತಾರೆ ಗೊತ್ತಾ.
Chanakya's secret of the rich, if you follow this rule, your poverty will run away, you know what the rich do.
Chanakya Neeti: ಮನುಷ್ಯನಿಗೆ ಬಡತನ ಸಂಕಷ್ಟ ಬರುವುದು ಸ್ವತಃ ನಮ್ಮಲ್ಲಿರುವ ಕೆಟ್ಟ ಅಭ್ಯಾಸಗಳಿಂದ. ನಮ್ಮಲ್ಲಿ ಉಂಟಾಗುವ ಕೆಲವು ಕೊರತೆಗಳು ನಮ್ಮ ಬಡತನಕ್ಕೆ ಮೂಲ ಕಾರಣ ಎಂದು ಚಾಣಕ್ಯ ಹೇಳಿದ್ದಾರೆ. ಒಬ್ಬ ವ್ಯಕ್ತಿ ಬಡತನಕ್ಕೆ ಹೋಗಲು ಹಲವಾರು ಕಾರಣಗಳಿವೆ ಅದನ್ನು ಯೋಚನೆ ಮಾಡುವ ಮುಂಚೆ ಚಾಣಿ ಕೇಳಿರುವ ಯಾವ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ನಿಮ್ಮ ಬಡತನ ಓಡಿ ಹೋಗುತ್ತದೆ ಎಂದು ಸಂಪೂರ್ಣವಾಗಿ ತಿಳಿಯಿರಿ. ಚಾಣಕ್ಯರು ಐದು ನಿಯಮಗಳನ್ನು ಪಾಲಿಸಿದ್ದಾರೆ. ಈ ನಿಯಮಗಳನ್ನು ನೀವು ಕೂಡ ಪಾಲಿಸಿದರೆ ಬಡತನ ಎಂದಿಗೂ ಕೂಡ ನಿಮ್ಮ ಹತ್ತಿರ ಸುಳಿಯುವುದಿಲ್ಲ.
ನಿಮ್ಮ ಗುಟ್ಟು: ಮೊದಲಿಗೆ ನಿಮ್ಮಲ್ಲಿರುವ ಗುಟ್ಟನ್ನು ನೀವು ಯಾರಿಗೂ ಹೇಳಿಕೊಳ್ಳಬೇಡಿ ನಿಮ್ಮ ಸಂಬಂಧಿಕರು ನಿಮ್ಮ ಸ್ನೇಹಿತರು ಯಾರಿಗೂ ಕೂಡ ಹೇಳಿಕೊಳ್ಳಬೇಡಿ ಅವರು ನಿಮಗೆ ಇಷ್ಟ ಹತ್ತಿರವಾಗಿದ್ದರು ಕೂಡ ನೀವು ಇದನ್ನು ಮಾತ್ರ ಮಾಡಬೇಡಿ. ಸೂಕ್ಷ್ಮ ಮಾಹಿತಿಯನ್ನು ಗುಟ್ಟನ್ನು ನೀವು ಅನಗತ್ಯವಾಗಿ ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ನೀವು ಈ ರೀತಿಯಾಗಿ ಹುಡುಗಿ ಅಥವಾ ಬೇರೆ ಯಾವುದೇ ರೀತಿಯ ಗುಟ್ಟಿನ ವಿಚಾರವನ್ನು ಹಂಚಿಕೊಂಡರೆ ಅದು ಮೂರನೇ ವ್ಯಕ್ತಿಗೆ ತಲುಪುತ್ತದೆ. ಇದಕ್ಕಾಗಿ ನೀವು ಈ ಗೌಪ್ಯ ವಿಷಯವನ್ನು ಸದಾ ಕಾಪಾಡಿಕೊಳ್ಳಬೇಕು.
ಅನಗತ್ಯ ಕರ್ಚು: ನಮ್ಮ ಜೀವನದಲ್ಲಿ ಹಣ ಎಂಬುದು ಅತ್ಯಂತ ತುಂಬಾನೇ ಮುಖ್ಯವಾದ ವಸ್ತು. ಯಾವಾಗ ನಮಗೆ ಹಣದ ಅಗತ್ಯ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನೀವೇನಾದರೂ ಯಾವುದಾದರೂ ಉದ್ಯೋಗ ಪ್ರಾರಂಭಿಸಲು ಕೂಡ ಹಣ ಬೇಕಾಗುತ್ತದೆ ಜೊತೆಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ಕೂಡ ಹಣ ಬೇಕಾಗುತ್ತದೆ. ನಾವು ನಮ್ಮ ಜೀವನದಲ್ಲಿ ದಿನದಲ್ಲಿ ಎಷ್ಟು ದುಡಿಯುತ್ತೇವೆ ಅದರಲ್ಲಿ 30 ಭಾಗದಷ್ಟು ಉಳಿಸಬೇಕು. ಉಳಿತಾಯ ಮಾಡಿದವನು ಮಾತ್ರ ಶ್ರೀಮಂತನಾಗುತ್ತಾನೆ ಅನಗತ್ಯ ಖರ್ಚು ಮಾಡಿದವನು ಶ್ರೀಮಂತನಾದ ಉದಾಹರಣೆ ಇಲ್ಲ.
ಸ್ಪಷ್ಟವಾದ ನಿರ್ಧಾರ: ನೀವು ನಿಮ್ಮ ಜೀವನದ ಗುರಿಯ ಮೇಲೆ ನಿಮ್ಮ ಭವಿಷ್ಯದ ಮೇಲೆ ಸ್ಪಷ್ಟವಾದ ನಿರ್ಧಾರವನ್ನು ಹೊಂದಿರಬೇಕು. ಮತ್ತು ನೀವು ಆ ಗುರಿಯನ್ನು ಸಾಧಿಸಲು ಸತತವಾದ ಪ್ರಯತ್ನ ಮಾಡುತ್ತಲೇ ಇರಬೇಕು. ನೀವು ಸಾಧನೆ ಮಾಡಬೇಕು ಅಂದುಕೊಂಡಿರುವ ಗುರಿಯ ಬಗ್ಗೆ ಅನಗತ್ಯ ವ್ಯಕ್ತಿಯ ಜೊತೆ ಹೇಳಿಕೊಳ್ಳಬಾರದು. ಏಕೆಂದರೆ ಅವರು ನಿಮ್ಮ ಮನಸ್ಸು ಮತ್ತು ನಿಮ್ಮ ಗುರಿಯನ್ನು ಹಾಳು ಮಾಡಬಹುದು. ನೀವು ನಿಮ್ಮ ಗುರಿಯ ಕಡೆ ನಡೆದರೆ ನೀವು ಶ್ರೀಮಂತರಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುತ್ತಾರೆ ಚಾಣಕ್ಯ.
ಬುದ್ದಿವಂತಿಕೆಯ ಗೆಳೆತನ: ಯಾರು ನಿಮ್ಮನ್ನು ಪ್ರತಿದಿನ ಒಳ್ಳೆಯ ಕೆಲಸ ಮಾಡಲು ಪ್ರೋತ್ಸಾಹ ಮಾಡುತ್ತಾರೆ ಕೆಟ್ಟ ಕೆಲಸದಿಂದ ದೂರ ಇಡುತ್ತಾನೆ ಅಂತಹ ವ್ಯಕ್ತಿಯ ಜೊತೆ ಸ್ನೇಹ ಮಾಡಿ ಇಬ್ಬರ ಮನಸ್ಥಿತಿ ಕೂಡ ಒಟ್ಟಿಗೆ ಇದ್ದರೆ ಅವರು ನಿಮ್ಮೊಡನೆ ಸಹಕರಿಸುತ್ತಾರೆ ಅದಕ್ಕಾಗಿ ಒಬ್ಬ ಒಳ್ಳೆಯ ಗೆಳೆಯನ ಸಹಾಯ ತುಂಬಾನೇ ಇರುತ್ತದೆ. ಅದಕ್ಕಾಗಿ ನಾವು ಬುದ್ಧಿವಂತಿಕೆಯಿಂದ ಸ್ನೇಹವನ್ನು ಮಾಡಬೇಕಾಗುತ್ತದೆ. ಇದರ ಜೊತೆಗೆ ಮಹಿಳೆಯರ ಹುಚ್ಚು, ಜೂಜು ಮುಂತಾದವುಗಳಿಂದ ದೂರ ಇರಬೇಕು ಎಂದು ಹೇಳುತ್ತಾರೆ ಚಾಣಕ್ಯ. ಚಾಣಕ್ಯ ತಿಳಿಸಿರುವ ನಿಯಮಗಳನ್ನು ನೀವು ಪಾಲಿಸಿದರೆ ಶ್ರೀಮಂತರಾಗುವುದರಲ್ಲಿ ಅನುಮಾನವೇ ಇಲ್ಲ.
ಒಂದು ವಾರವು ತಪ್ಪದೇ ಪ್ರತಿ ಸೋಮವಾರ ಶಿವನಿಗೆ ಈ ರೀತಿ ಮಾಡುವುದರಿಂದ ಶಿವನ ಆಶೀರ್ವಾದ ನಿಮಗೆ ಸದಾ ಇರುತ್ತದೆ!!