Gruha Jyothi scheme: ಶುಭ ಸುದ್ದಿ ಈ ದಿನದಿಂದ ಕರೆಂಟ್ ಬಿಲ್ ಕಟ್ಟುವಂತಿಲ್ಲ, ಕೊನೆಗೂ ದಿನಾಂಕ ನಿಗದಿತ !!
Finally date scheduled for not to pay bill for electricity (Gruha Jyothi scheme)
ಮೇ 10 ರಂದು ನಡೆದಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಂತಹ ಸಿದ್ದರಾಮಯ್ಯರವರು ಅತಿ ಹೆಚ್ಚಿನ ಮೆಜಾರಿಟಿ ವೋಟುಗಳನ್ನು ಪಡೆದು ಮುಖ್ಯಮಂತ್ರಿ ಪದವಿಯನ್ನು ಗಳಿಸಿಕೊಂಡರು. ಆಗ ಇವರು ಐದು ಆಮಿಷಗಳನ್ನು ಒಡ್ಡಿದ್ದರು. ಗ್ರಹ ಜ್ಯೋತಿ, ಗೃಹಲಕ್ಷ್ಮಿ ಹೀಗೆ ಐದು ಯೋಜನೆಗಳನ್ನು ಇವರು ಜನರಿಗೆ ನೀಡಿದ್ದರು.
ಅವುಗಳಲ್ಲಿ ಪ್ರಮುಖವಾದದ್ದು ಗೃಹಜೋತಿ ಯೋಜನೆ (Gruha Jyothi scheme) ಒಂದು ವೇಳೆ 200 ಯೂನಿಟ್ ಗಳಿಗಿಂತಲೂ ಕಡಿಮೆ ಬಂದರೆ ನೀವು ಯಾವುದೇ ರೀತಿಯಾದಂತಹ ಕರೆಂಟ್ ಬಿಲ್ಲನ್ನು ಸಹ ಕಟ್ಟುವಂತಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಆದೇಶ ನೀಡಿತ್ತು ಅದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.
ಆಗಸ್ಟ್ ಒಂದರಿಂದ 200 ಯೂನಿಟ್ ಗಳ ಉಚಿತ ಯೋಜನೆಯನ್ನು ಎಲ್ಲರೂ ಸಹ ಪಡೆದುಕೊಳ್ಳಬಹುದು. ಆದರೆ ಇದಕ್ಕೆ ಕೆಲವೊಂದು ನಿಯಮ ನಿಬಂಧನೆಗಳಿವೆ. ಅವು ಏನೆಂದರೆ ಜುಲೈ 25ರ ಒಳಗಾಗಿ 200 ಯೂನಿಟ್ ಉಚಿತ ಯೋಜನೆಗೆ ನೀವು ಅಪ್ಲೈ ಮಾಡಿರಬೇಕು. ಒಂದು ವೇಳೆ ಮಾಡಿಲ್ಲದಿದ್ದರೆ ಮುಂದಿನ ತಿಂಗಳಿನಿಂದ ಮುಂದಿನ ತಿಂಗಳ ಯೋಜನೆಯನ್ನು ನೀವು ಪಡೆಯಲು ಅರ್ಹತೆ ಇರುವುದಿಲ್ಲ ಕಟ್ಟಬೇಕಾಗುತ್ತದೆ. ಅದಕ್ಕಾಗಿ ಜುಲೈ 25ರ ಒಳಗೆ ಇದನ್ನು ಅಪ್ಲೈ ಮಾಡಿರಬೇಕು.
ಒಂದು ವೇಳೆ ನೀವು ಬಳಸುವ ವಿದ್ಯುತ್ 200 ಯೂನಿಟ್ ಗಳಿಗಿಂತ ಕಡಿಮೆ ಇದ್ದರೆ ನೀವು ಯಾವುದೇ ರೀತಿಯಾದಂತಹ ಹಣವನ್ನು ಸಹ ಪಾವತಿಸಬೇಕಾಗಿಲ್ಲ. ಒಂದು ವೇಳೆ ಮೂರು ತಿಂಗಳು ಬಿಟ್ಟು ನಂತರ 200 ಯೂನಿಟ್ ಗಳ ಮೇಲೆ ಅತಿ ಆದ ಹಣ ಬಂದರೆ ನೀವು ಖಂಡಿತವಾಗಿಯೂ ಬಿಲ್ ನ ಮೊತ್ತದ ಹಣವನ್ನು ಪಾವತಿಸಬೇಕಾಗುತ್ತದೆ.
ಗೃಹ ಜ್ಯೋತಿ ಯೋಜನೆಯನ್ನು ಇದೇ ಆಗಸ್ಟ್ ತಿಂಗಳಿನಿಂದ ನೀವು ಪಡೆದುಕೊಳ್ಳಬಹುದು. ಒಂದು ವೇಳೆ ನಿಮಗೆ ಹಳೆಯ ಬಾಕಿ ಯಾವುದಿದ್ದರೂ ಸಹ ಅದನ್ನು ಮುಂದಿನ ಮೂರು ತಿಂಗಳೊಳಗೆ ನೀವು ಅದನ್ನು ಪಾವತಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಆಗಸ್ಟ್ ನಿಂದಲೇ ನೀವು ಉಚಿತ ಗೃಹ ಜ್ಯೋತಿ ಯೋಜನೆಯನ್ನು ಪಡೆದುಕೊಳ್ಳಬಹುದು ಎಂದು ಕಾಂಗ್ರೆಸ್ ಸರ್ಕಾರ ಹೇಳಲಾಗುತ್ತಿದೆ. ಅದು ಸಹ ನೀವು ಇಷ್ಟು ದಿನ ಬಳಸಿದ ವಿದ್ಯುತ್ ನೊಂದಿಗೆ 10% ರಷ್ಟು ವಿದ್ಯುತ್ ಅನ್ನು ಬಳಸಬಹುದು. ಎಂದು ಸರ್ಕಾರ ಘೋಷಿಸಿದೆ.