ಎಲ್ಲಾ ಪುರುಷರಿಗೂ ಗುಡ್ ನ್ಯೂಸ್, ಪುರುಷರಿಗೂ ಇನ್ನುಮುಂದೆ ರಾಜ್ಯದಲ್ಲಿ ಓಡಾಡೋಕೆ ಕಡಿಮೆ ದರದಲ್ಲಿ, ಪ್ರಯಾಣ ಸೇವೆ ಸಿಗಲಿದೆ.
Free bus for men in Karnataka
Free bus for men in Karnataka: ಕರ್ನಾಟಕ ರಾಜ್ಯದಲ್ಲಿ ಹೊಸ ಸರ್ಕಾರದ ಅಡಿಯಲ್ಲಿ ಬಂದಿರುವ ಯೋಜನೆಗಳ ಪ್ರಕಾರ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಿದ್ದು ಇದೇ ರೀತಿ ಇದೀಗ ರಾಜ್ಯ ಸರ್ಕಾರವು ಎಲ್ಲಾ ಪುರುಷರಿಗೂ ಕೂಡ ಉಚಿತ ಬಸ್ ಪಾಸ್ ಎಂದು ಘೋಷಣೆ ಮಾಡಿದೆ. ಕಾಂಗ್ರೆಸ್ ಸರ್ಕಾರವು ಜನರಿಗೆ ಐದು ಭರವಸೆಗಳನ್ನು ಕೊಟ್ಟಿತ್ತು ಅದೇ ರೀತಿ ಅಧಿಕಾರಕ್ಕೆ ಬಂದ ನಂತರ ಐದು ಭರವಸೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ.
ಈಗಾಗಲೇ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಗೆ ಈಗಷ್ಟೇ ಅರ್ಜಿಗಳನ್ನು ಹಾಕಲು ಜನರು ಮುಂದಾಗಿದ್ದಾರೆ. ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ಬಿಡುಗಡೆ ಮಾಡಿರುವ ಶಕ್ತಿ ಯೋಜನೆ, ಚಾಲ್ತಿಯಲ್ಲಿದ್ದು ಈ ಯೋಜನೆಯ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಇರುವ ಎಲ್ಲಾ ಮಹಿಳೆಯರು ಕರ್ನಾಟಕ ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಬಸ್ನಲ್ಲಿ ಎಲ್ಲಿ ಬೇಕಾದರೂ ಉಚಿತವಾಗಿ ಓಡಾಡಬಹುದು.
ದೇಶದಾದ್ಯಂತ ಇಂದಿನ ಚಿನ್ನದ ದರ ಹೇಗಿದೆ ತಿಳಿಯಿರಿ ಇಂದು ಚಿನ್ನ ಖರೀದಿಸಲು ಉತ್ತಮ ಸಮಯವೇ ನೋಡಿ.
ಜೂನ್ 11ರಂದು ಸಿಎಂ ಸಿದ್ದರಾಮಯ್ಯನವರು ಶಕ್ತಿ ಯೋಜನೆಗೆ ಚಾಲ್ತಿ ನೀಡಿದ್ದು , ನಂತರದ ದಿನಗಳಲ್ಲಿ ಈ ಯೋಜನೆ ಬಂದ ನಂತರ ಎಲ್ಲಾ ಮಹಿಳೆಯರು ಕೆಂಪು ಬಣ್ಣದ ಬಸ್ಗಳಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಎಲ್ಲಿ ನೋಡಿದರೂ ಮಹಿಳೆಯರೇ ಅತೀ ಹೆಚ್ಚಾಗಿ ಕರ್ನಾಟಕ ರಾಜ್ಯದಾದ್ಯಂತ ಕಾಣಿಸುತ್ತಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ತೀರ್ಥಕ್ಷೇತ್ರಗಳು ಧರ್ಮ ಕ್ಷೇತ್ರಗಳು ಧರ್ಮಸ್ಥಳ ಕುಕ್ಕೆ ಸುಬ್ರಮಣ್ಯ ಹೀಗೆ ಹಲವಾರು ದೇವಾಲಯಗಳೆಂದು ತುಂಬಿ ತುಳುಕುತ್ತಿದ್ದಾರೆ.
ಈ ನಡುವೆ ಪುರುಷರ ಕೂಡ ಆಕ್ರೋಶ ವ್ಯಕ್ತಪಡಿಸಿ ಕೇವಲ ಮಹಿಳೆಯರಿಗೆ ಮಾತ್ರ ಕೊಟ್ಟರೆ ಹೇಗೆ ನಮಗೂ ಫ್ರೀ ಕೊಡಿ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು. ಈ ರೀತಿ ತಮ್ಮ ಬೇಡಿಕೆಯನ್ನು ಕೇಳಿದ ಪುರುಷರಿಗೂ ಕೂಡ ಸರ್ಕಾರ ಇದೀಗ ಒಂದು ಗುಡ್ ನ್ಯೂಸ್ ಕೊಟ್ಟಿದೆ. ಪುರುಷರಿಗೂ ಕೂಡ ಸರ್ಕಾರ ಉಚಿತ ಬಸ್ ಫ್ರೀ ನೀಡಲಿದೆ. ಈಗ ಬಸ್ಗಳಲ್ಲಿ ಅತಿ ಹೆಚ್ಚಾಗಿ ಮಹಿಳೆಯರು ಓಡಾಡುತ್ತಿರುವ ಕಾರಣ ಪುರುಷರು ಬಸ್ಗಳಲ್ಲಿ ಓಡಾಡುವುದು ಕೂಡ ತುಂಬಾ ಕಷ್ಟವಾಗಿದೆ ಎಂದು ತಮ್ಮ ಸಮಾಧಾನವನ್ನು ಕೆಲವೊಂದಿಷ್ಟು ಕಡೆ ಹೊರಹಾಕಿದ್ದಾರೆ.
ಅಧಿಕ ಮಾಸದಲ್ಲಿ ಮಗು ಜನಿಸಿದರೆ ಏನಾಗುತ್ತದೆ, ಈ ಮಾಸದ ಮಗುವಿನ ಸ್ವಭಾವ ಮತ್ತು ಭವಿಷ್ಯದಲ್ಲಿ ಮಗು ಹೇಗಿರುತ್ತದೆ.
ಹೀಗಾಗಿ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದ್ದು ಇನ್ನೂ ಕೆಲವೇ ದಿನಗಳಲ್ಲಿ ಪುರುಷರಿಗೂ ಕೂಡ ಒಂದು ವಿಶೇಷ ಸೌಲಭ್ಯ ಸಿಗಲಿದೆ ಅದೇನೆಂದರೆ ಇನ್ನು ಮುಂದೆ ಪುರುಷರಿಗೆ ಟಿಕೆಟ್ ಬೆಲೆ ಕಡಿಮೆ ಮಾಡಲಾಗುತ್ತದೆ. ನಿಮಗೆ ಗೊತ್ತಿರುವ ಹಾಗೆ ಈಗ ಟೆಕ್ನಾಲಜಿ ಎಂಬುದು ತುಂಬಾನೇ ಬಹಳ ಬೆಳೆದಿದೆ. ಸಾಕಷ್ಟು ರೀತಿಯ ಹೊಸ ಹೊಸ ವಿಚಾರಗಳು ಜಾರಿಗೆ ಬರುತ್ತಿದೆ. ಉದಾಹರಣೆಗೆ ನಮ್ಮ ರಾಜ್ಯದಲ್ಲಿ ಇದೀಗ ಎಲೆಕ್ಟ್ರಿಕ್ ಬಸ್ಸುಗಳನ್ನು ಸಹ ನೋಡಬಹುದಾಗಿದೆ. ಇದರ ಜೊತೆಗೆ ಮುಂಬರುವ ದಿನಗಳಲ್ಲಿ CNG ಬಸುಗಳು ಕೂಡ ರಾಜ್ಯಕ್ಕೆ ಪಾದರ್ಪಣೆ ಮಾಡುತ್ತಿವೆ.
ಡೀಸೆಲ್ ಬಸ್ ಗಳಿಗಿಂತ CNG ಓಡಿಸುವ ಬಸ್ ಗಳು ಒಳ್ಳೆಯ ಪರ್ಫಾರ್ಮೆನ್ಸ್ ಕೊಡುತ್ತದೆ. ಬಸುಗಳು ಕೂಡ ಇದರಿಂದ ಒಳ್ಳೆಯ ಪಿಕಪ್ ತೆಗೆದುಕೊಳ್ಳುತ್ತದೆ ಜೊತೆಗೆ ಸರ್ಕಾರಕ್ಕೆ ಸಿಎನ್ಜಿ ಬಸ್ ಗಳನ್ನು ನಡೆಸುವುದು ಕೂಡ ತುಂಬಾ ಸುಲಭದ ಕೆಲಸವಾಗಿದೆ. ಹೀಗಾಗಿ ರಾಜ್ಯಕ್ಕೆ ಸಿಎನ್ಜಿ ಬಸ್ಗಳು ಬರುತ್ತಿದ್ದು ಆದ ಕಾರಣ ಟಿಕೆಟ್ ದರದಲ್ಲಿ ಬಾರಿ ಇಳಿಕೆಯನ್ನು ಇನ್ನು ಮುಂದೆ ನೋಡಬಹುದಾಗಿದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ಪುರುಷರು ಕೂಡ ಇನ್ನು ಮುಂದೆ ಬಸ್ಗಳಲ್ಲಿ ಕಡಿಮೆ ದರದಲ್ಲಿ ಪ್ರಯಾಣ ಮಾಡಬಹುದು.
ಮಾಂಸಹಾರವನ್ನು ಯಾವ ದಿನ ಸೇವಿಸಬೇಕು ! ವಾರದಲ್ಲಿ ಯಾವ ದಿನ ಸೇವಿಸಬಾರದು ಇದರಿಂದ ಆಗುವ ಪರಿಣಾಮಗಳೇನು!!