ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆ ಅಡಿಯಲ್ಲಿ ಸರ್ಕಾರವೇ ಬಂದು ನಿಮ್ಮ ಜಮೀನಿಗೆ ರಸ್ತೆ ಮಾಡಿ ಕೊಡುತ್ತೆ, ಇಷ್ಟು ಮಾಡಿ ಸಾಕು.
MGNREGA KARNATAKA : Mahatma Gandhi National Rural Employment Guarantee Act
MGNREGA KARNATAK (Mahatma Gandhi National Rural Employment Guarantee Act) ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿರುವ ಸಿಎಂ ಸಿದ್ದರಾಮಯ್ಯನವರು ನಮ್ಮ ಹೋಲ ನಮ್ಮ ರಸ್ತೆ ಎನ್ನುವ ಹೊಸ ಯೋಜನೆ ಮೂಲಕ ಯಾವ ಜಮೀನುಗಳಿಗೆ ರಸ್ತೆ ಲಭ್ಯವಿಲ್ಲ ಅಂತಹ ಜಮೀನುಗಳಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ವಾಹನ ಸಂಚಾರ ಮಾಡಲು ರಸ್ತೆಗಳನ್ನು ಮಾಡಿಕೊಡುವ ಯೋಜನೆಯನ್ನು ಕರ್ನಾಟಕ ಸರ್ಕಾರವು ಕೈಗೊಂಡಿದೆ.
ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೆ ಇದೊಂದು ಸುಲಲಿತ ಅವಕಾಶವಾಗಿದ್ದು ರೈತರು ತಮ್ಮ ಜಮೀನುಗಳಿಗೆ ಹೋಗಲು ಬರಲು ಬೇರೆ ಬೇರೆ ಜಮೀನುಗಳ ಮೇಲೆ ಹೋಗಬೇಕಾಗಿತ್ತು. ಆದರೆ ಅಕ್ಕಪಕ್ಕದವರ ಜಮೀನಿನ ಮಾಲೀಕರು ಅವರ ಕಿರಿಕಿರಿಯ ಜಗಳದಿಂದಾಗಿ ರೈತರು ಕಂಗಾಲಾಗಿ ಅವರ ಕೈಯಲ್ಲಿ ಅವಮಾನ ಮಾಡಿಸಿಕೊಂಡು ಆದರೂ ಕೂಡ ಅವರ ಜಮೀನಿನ ಮೇಲೆ ತಮ್ಮ ಜಮೀನಿಗೆ ಓಡಾಡಬೇಕಾದ ಸಂದರ್ಭ ಬಂದಿದೆ.
ಮಾಂಸಹಾರವನ್ನು ಯಾವ ದಿನ ಸೇವಿಸಬೇಕು ! ವಾರದಲ್ಲಿ ಯಾವ ದಿನ ಸೇವಿಸಬಾರದು ಇದರಿಂದ ಆಗುವ ಪರಿಣಾಮಗಳೇನು!!
ಆದರೆ ಯಾರ ಅಧಿಕಾರವೂ ಇಲ್ಲದೆ ಯಾರ ಮುಲಾಜು ಇಲ್ಲದೆ ಪ್ರತಿಯೊಬ್ಬ ರೈತನು ಇನ್ನು ಮುಂದೆ ಅವನ ಜಮೀನಿಗೆ ಬಹಳ ಸುಲಭವಾಗಿ ಸುರಕ್ಷತೆಯಾಗಿ ಓಡಾಡಬಹುದು. ನಮ್ಮ ರಸ್ತೆ ನಮ್ಮ ಯೋಜನೆ ಅಡಿಯಲ್ಲಿ ಸರ್ಕಾರದಿಂದ ರಸ್ತೆ ಇಲ್ಲದ ಜಮೀನುಗಳಿಗೆ ಹೊಸ ರಸ್ತೆ ಮಾಡಲು 23 feet ರಸ್ತೆ ಮಾಡಲು ಸರ್ಕಾರ ಈ ಕಾರ್ಯಕ್ರಮವನ್ನು ಕೈಗೊಂಡಿದೆ.
ನಮ್ಮ ಹೊಲ ನಮ್ಮ ರಸ್ತೆ ಹೊಸ ಯೋಜನೆಗೆ ಬೇಕಾದ ದಾಖಲಾತಿಗಳು.
ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದೆ ಇದ್ದರೆ ಅಕಸ್ಮಾತ್ ಹಳ್ಳ ಕೊಳ್ಳ ಅಥವಾ ಮಾರ್ಗವೇ ಇಲ್ಲದಿದ್ದರೆ ನಮ್ಮ ರಸ್ತೆ ನಮ್ಮ ವಲ ಯೋಜನೆ ಅಡಿಯಲ್ಲಿ ನೀವು ಅರ್ಜಿಯನ್ನು ಸಲ್ಲಿಸಿ ಅರ್ಜಿಗೆ ಏನೆಲ್ಲಾ ದಾಖಲೆಗಳು ಬೇಕು ಎಂದು ಸಂಪೂರ್ಣವಾಗಿ ತಿಳಿಯಿರಿ. ಗ್ರಾಮೀಣ ಪ್ರದೇಶದಲ್ಲಿ ಅಥವಾ ಹಳ್ಳಿ ಗ್ರಾಮಗಳಲ್ಲಿ ಒಬ್ಬ ರೈತನ ತಮ್ಮ ಜಮೀನಿಗೆ ಹೋಗಬೇಕು ಎಂದರೆ ಮತ್ತೊಬ್ಬ ರೈತನ ಜಮೀನಿನ ಮೇಲೆ ಹೋಗಬೇಕಾಗುತ್ತದೆ.
ಎಸ್ ಬಿ ಐ ಬ್ಯಾಂಕ್ ಅಕೌಂಟ್ ಇದ್ದವರಿಗೆ 3 ರೀತಿಯ ಬಂಪರ್ ಗುಡ್ ನ್ಯೂಸ್.
ಏಕೆಂದರೆ ಸರಿಯಾದ ರೀತಿಯ ರಸ್ತೆ ಮಾರ್ಗ ಇರುವುದಿಲ್ಲ ಸಾಕಷ್ಟು ಬಾರಿ ಇದೇ ರಸ್ತೆ ಮಾರ್ಗವಾಗಿ ರೈತರ ನಡುವೆ ಸಾಕಷ್ಟು ದೊಡ್ಡ ದೊಡ್ಡ ಜಗಳಗಳು ಕೂಡ ಆಗಿದ್ದು ಉಂಟು. ರೈತರಿಗೆ ರಸ್ತೆ ಮಾಡಿಕೊಡಲು ಸರ್ಕಾರ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ರಸ್ತೆ ಮಾಡಿಕೊಡುವ ಯೋಚನೆಯನ್ನು ಮಾಡುತ್ತಿದೆ. ಈ ಯೋಜನೆ ಅಡಿಯಲ್ಲಿ ರೈತರು ಬಹಳ ಸುಲಭವಾಗಿ ಸರಕಾರದಿಂದ ತಮ್ಮ ತಮ್ಮ ಜಮೀನುಗಳಿಗೆ ರಸ್ತೆ ಮಾಡಿಸಿಕೊಂಡು ಯಾರ ಅಂಗು ಇಲ್ಲದೆ ಓಡಾಡಲು ಬಹಳ ಸುಲಭವಾಗಿ ಇದಾಗಿದೆ.
ನಿಮಗೆ ಇರುವ ಜಮೀನಿನ ರಸ್ತೆಯ ಸಮಸ್ಯೆಯನ್ನು ನೀವು ಬರೆದು ನಿಮ್ಮ ಊರಿನ ಗ್ರಾಮ ಪಂಚಾಯಿತಿಗೆ ಕೊಟ್ಟರೆ ಅದನ್ನು ಪರಿಶೀಲಿಸಿ ನಿಮ್ಮ ಜಮೀನಿಗೆ ಹೋಗುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ. ನಿಮ್ಮ ಜಮೀನಿಗೆ ಹೋಗಲು ರಸ್ತೆ ಇಲ್ಲ ಅಥವಾ ರಸ್ತೆ ದುರಸ್ತಿ ಕೆಲಸ ಆಗಬೇಕು ಎಂದರೆ ನೀವು ಒಂದು ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು ನಿಮ್ಮ ಹೊಲದ ಸರ್ವೆ ನಂಬರ್ ನಿಮ್ಮ ಜಮೀನಿನ ಒಟ್ಟು ವಿಸ್ತೀರ್ಣ ಜೊತೆಗೆ ಇನ್ನು ಜಮೀನಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಕೂಡ ನೀವು ಅಲ್ಲಿ ದಾಖಲಾತಿ ಮಾಡಬೇಕು.
ನಂತರ ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಈ ವಿಚಾರವಾಗಿ ಕುರಿತು ಮಾತನಾಡಿ ಅದನ್ನು ವಾರ್ಷಿಕ ಕೆಲಸಗಳ ಪಟ್ಟಿಯಲ್ಲಿ ಸೇರಿಸಿ ನಿಮಗೆ ಈ ಕೆಲಸ ಆಗುವಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಮಾಡುತ್ತಾರೆ. ನಂತರ ಗ್ರಾಮ ಪಂಚಾಯಿತಿಯಿಂದ ಒಬ್ಬ ಸಿಬ್ಬಂದಿ ಬಂದು ನಿಮ್ಮ ಜಮೀನನ್ನು ಅಳತೆ ಮಾಡಿ ಅಲ್ಲಿ ರಸ್ತೆ ಎಷ್ಟು ಇದೆ ಅಲ್ಲಿ ಕೆಲಸ ಮಾಡಲು ಏನೆಲ್ಲಾ ಅಗತ್ಯ ವಸ್ತುಗಳು ಬೇಕಾಗುತ್ತದೆ ಜೊತೆಗೆ ಎಷ್ಟು ಜನ ಆಳುಗಳು ಬೇಕಾಗುತ್ತದೆ ಎಂದು ಪರೀಕ್ಷೆ ಮಾಡಿಕೊಂಡು ಬರುತ್ತಾರೆ.
ಇನ್ನು ಈ ರಸ್ತೆಯನ್ನು ಮಾಡಲು ಜಮೀನಿನ ಆಜು ಬಾಜುದಾರರು ಒಪ್ಪಿಗೆಯನ್ನು ಸಹ ನೀಡಬೇಕಾಗುತ್ತದೆ. ಈ ರಸ್ತೆಯನ್ನು ಮನುಷ್ಯ ಹಾಗೂ ಯಂತ್ರೋಪಕರಣಗಳ ಸಹಾಯದಿಂದ ಮಾಡಲಾಗುತ್ತದೆ. ನಿಮ್ಮ ಜಮೀನುಗಳಿಗೆ ರಸ್ತೆ ಇಲ್ಲದೆ ಹೋದರೆ ನೀವು ಈ ರೀತಿಯ ಕ್ರಮ ಕೈಗೊಂಡು ನಿಮ್ಮ ಜಮೀನು ಅಥವಾ ಹೊಲಗಳಿಗೆ ರಸ್ತೆಯನ್ನು ಮಾಡಿಸಿಕೊಳ್ಳಬಹುದಾಗಿದೆ…
ಇದೀಗ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್..!! ತಿದ್ದುಪಡೆ ಮನೆ ಯಜಮಾನಿ ಹಾಗೂ ಹೆಸರು ಸೇರಿಸುವುದು..