ಕನ್ನಡದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಅವರು ರಾಜಕೀಯ ವ್ಯಕ್ತಿಯಾಗಿರುವ ಜಗದೀಶ್ ಆರ್ ಚಂದ್ರ ಅವರನ್ನು 2017ರ ಲ್ಲಿ ವಿವಾಹ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಜಗದೀಶ್ ಅವರು ತಮ್ಮ 30ನೆಯ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಇವರ ಬರ್ತಡೇಗೆ ಸಿನಿಮಾದ ಬಹುತೇಕ ಕಲಾವಿದರು ಆಗಮನ ಮಾಡಿದ್ದರು.
ಅದರಲ್ಲಿ ಡಿ ಬಾಸ್ ದರ್ಶನ್ ಅವರು ಕೂಡ ಬಂದಿದ್ದರು. ಇನ್ನು ದರ್ಶನ್ ಅವರು ಕೊಟ್ಟ ಸರ್ಪ್ರೈಸ್ ಕೂಡ ತುಂಬಾನೇ ಚೆನ್ನಾಗಿತ್ತು. ಈ ಅಪರೂಪದ ವಿಡಿಯೋವನ್ನು ಇಲ್ಲಿ ನೀವು ನೋಡಬಹುದು. ಇನ್ನು ಅಮೂಲ್ಯ ಅವರು ಸೆಪ್ಟೆಂಬರ್ 14 1993 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿಯ ಹೆಸರು ಜಯಲಕ್ಷ್ಮಿ ಮತ್ತು ಇವರಿಗೆ ದೀಪಕ್ ಅರಸ್ ಎನ್ನುವ ಸ್ವಂತ ಅಣ್ಣ ಕೂಡ ಇದ್ದಾರೆ.
ಅಮೂಲ್ಯ ಅವರು ಬಾಲನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಹೌದು ಇವರು 2002 ರಲ್ಲಿ ಬಿಡುಗಡೆಯಾದ ಪರ್ವ ಎನ್ನುವ ಚಿತ್ರದ ಮೂಲಕ ಬಾಲ ನಟಿಯಾಗಿ ತೆರೆಯ ಮೇಲೆ ಕಾಣಿಸಿ ತಮ್ಮ ಸಿನಿಮಾ ಪಯಣವನ್ನು ಶುರುಮಾಡಿದರು.
ಇದಾದ ಮೇಲೆ ಚಂದು ಲಾಲಿಹಾಡು, ಮಹಾರಾಜ, ಮಂಡ್ಯ, ಸುಂಟರಗಾಳಿ, ಸಜನಿ, ನಮ್ಮ ಬಸವ, ತನನಂ ತನನಂ, ಕಲ್ಲರಳಿ ಹೂವಾಗಿ, ತಿಮ್ಮ ಎನ್ನುವ ಚಿತ್ರಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿ ಆಗಲೇ ಒಂದು ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡರು.
ತದನಂತರ 2007ರ ಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಗೆ ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಟಿಸಿ ಹೀರೋಯಿನ್ ಆಗಿ ತೆರೆಯ ಮೇಲೆ ಕಾಣಿಸಿದರು. ಇದಾದ ಮೇಲೆ ಚೈತ್ರದ ಚಂದ್ರಮ, ಪ್ರೇಮಿಸಂ, ನಾನು ನನ್ನ ಕನಸು, ಮನಸಾಲಜಿ, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಖುಷಿ ಖುಷಿಯಾಗಿ, ಮಳೆ, ರಾಮ್ ಲೀಲಾ, ಮದುವೆಯ ಮಮತೆಯ ಕರೆಯೋಲೆ, ಕೃಷ್ಣ ರುಕ್ಕು, ಮಾಸ್ತಿಗುಡಿ, ಮುಗುಳುನಗೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಅಮೂಲ್ಯ ಅವರು ಮದುವೆ ಮಾಡಿಕೊಂಡ ಮೇಲೆ ಯಾವ ಸಿನಿಮಾಗಳಲ್ಲಿ ಕೂಡ ನಟಿಸಲಿಲ್ಲ. ಹಾಗೆಯೇ ಇವರಿಗೆ ಇದೇ ವರ್ಷ ಮಾರ್ಚ್ 1 ರಂದು ಅವಳಿ ಜವಳಿ ಗಂಡು ಮಕ್ಕಳಿಗೆ ಜನ್ಮವನ್ನು ಸಹ ನೀಡಿದ್ದಾರೆ……