ಭೂಮಿಯ ಮೇಲೆ ಆಗುವ ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಎಷ್ಟು ನಿಜವೋ ಸುಳ್ಳೋ ಎನ್ನುವುದು ಗೊತ್ತಿಲ್ಲ. ಆದರೆ ಕೆಲವರು ಮಾತ್ರ ತಮಗೆ ಇಷ್ಟ ಬಂದ ಹಾಗೆ ಮದುವೆಗಳನ್ನು ಆಗುತ್ತಾರೆ. ಇದರಂತೆಯೇ ಒಂದು ವಿಚಿತ್ರವಾದ ಘಟನೆ ನಡೆದಿದೆ. ಅದು ಏನೆಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.
ಈ ಹಿಂದೆ ಹೆಣ್ಣು ಮಕ್ಕಳ ತಂದೆ ತಾಯಿ ವರದಕ್ಷಿಣೆ ಕೊಟ್ಟು ಮಗಳ ಮದುವೆಯನ್ನು ಮಾಡಬೇಕಿತ್ತು. ವರದಕ್ಷಿಣೆಯನ್ನು ಕೊಡಲು ಮಗಳ ತಂದೆ ತಾಯಿ ಪಡುವ ಪರದಾಟ ಅಷ್ಟಿಷ್ಟಲ್ಲ. ಇನ್ನೂ ವರದಕ್ಷಿಣೆಗಾಗಿಯೇ ಸಾಕಷ್ಟು ಘಟನೆಗಳು ಕೂಡ ನಡೆದು ಹೋಗಿದೆ. ಇನ್ನೂ ವರದಕ್ಷಿಣೆ ಕೊಟ್ಟು ಮದುವೆ ಮಾಡುವ ವಿಷಯಗಳಲ್ಲಿ ವಧು ವರರ ವಯಸ್ಸಿನ ಅಂತರವನ್ನು ಕೂಡ ಲೆಕ್ಕಕ್ಕೆ ಮಾಡುತ್ತಿರಲಿಲ್ಲ.
ಹಾಗಾಗಿ ಈ ರೀತಿಯ ಸಮಸ್ಯೆಗಳಿಗೆ ಈಗ ಸಾಕಷ್ಟು ಜನರು ಲವ್ ಮ್ಯಾರೇಜ್ ಆಗುತ್ತಿದ್ದಾರೆ. ಲವ್ ಮ್ಯಾರೇಜ್ ಆದರೆ ವಯಸ್ಸಿನ ಅಂತರ ಇರುವುದಿಲ್ಲ ವರದಕ್ಷಿಣೆ ಕಾಟವೂ ಇರುವುದಿಲ್ಲ ಎಂದು ಹೇಳಿ ಸಾಕಷ್ಟು ಜನರು ಇದನ್ನು ನೆಚ್ಚಿಕೊಂಡಿದ್ದಾರೆ. ಇನ್ನೂ ಇದರ ಮಧ್ಯೆ ವಧುದಕ್ಷಿಣೆ ಪದ್ಧತಿ ಕೂಡ ಆರಂಭವಾಗಿದೆ.
ಹೌದು ದೇಶದಲ್ಲಿ ಹೆಣ್ಣು ಮಕ್ಕಳ ಅಭಾವ ಇರುವ ಕಾರಣ ಒಂದು ಹುಡುಗಿ ಏನಾದರು ಇಷ್ಟವಾದರೆ ಆಕೆಯನ್ನು ಮದುವೆಯಾಗಬೇಕು ಎಂದರೆ ಮನೆಯವರಿಗೆ ವಧು ದಕ್ಷಿಣೆ ನೀಡುವ ಘಟನೆಗಳು ಕೂಡ ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದರ ಜೊತೆಗೆ ವರನು ಎಂಥವನೇ ಆಗಿದ್ದರೂ ಕೂಡ ಅವರನ್ನು ಮದುವೆ ಮಾಡಿಕೊಳ್ಳುವ ಹೆಣ್ಣುಮಕ್ಕಳು ಕೂಡ ಹೆಚ್ಚಾಗಿದ್ದಾರೆ ಎಂದರೆ ಅದು ಆಶ್ಚರ್ಯವಾಗುತ್ತದೆ.
ಇನ್ನೂ ಪಾಂಡಿಚೇರಿಯಲ್ಲಿ ನಡೆದ ಒಂದು ವಿವಾಹದ ಘಟನೆಯನ್ನು ಕೇಳಿದರೆ ಎಲ್ಲರಿಗೂ ಶಾಕ್ ಆಗುತ್ತದೆ. ಹೌದು ಪಾಂಡಿಚೆರಿಯ ವಿನಾಯಕ ದೇವಸ್ಥಾನದಲ್ಲಿ ಒಂದು ಸರಳವಾದ ಮದುವೆ ಜರುಗಿತು. ಇಲ್ಲಿ ವಧುವಿಗೆ 24 ವಯಸ್ಸು ಆಗಿದ್ದರೆ ವರನಿಗೆ ಬರೋಬ್ಬರಿ 76 ವಯಸ್ಸು ಆಗಿದೆ. ಇನ್ನು ಈತ ಮದುವೆಯಾಗಲು ವರ ವಧುದಕ್ಷಿಣೆಯನ್ನು ನೀಡಿ ಮದುವೆಯಾಗಿದ್ದಾರೆ.
ಹೌದು ವರ ವಧುವಿಗೆ ವಧುದಕ್ಷಿಣೆಯಾಗಿ 2 ಕೋಟಿ 50 ಲಕ್ಷ ರೂ. ಹಣ ಗಳನ್ನು ನೀಡಲಾಗಿದೆ. ಕೆಲವರು ಈ ಮದುವೆಯನ್ನು ನೋಡಿ ಶುಭವಾಗಲಿ ಅತಿಬೇಗ ಸಂತಾನ ಪ್ರಾಪ್ತಿಯಾಗಲಿ ಎಂದು ಬಯಸಿದರೆ ಇನ್ನೂ ಕೆಲವರು ಈ ರೀತಿ ಮದುವೆಯಾಗುವುದು ತಪ್ಪು ಒಬ್ಬರ ಜೀವನಕೋಸ್ಕರ ಮತ್ತೊಬ್ಬರ ಜೀವವನ್ನು ಬಲಿ ಕೊಡುವುದು ಎಷ್ಟು ಸರಿ ಎಂದು ಕೂಡ ಸಾಕಷ್ಟು ಜನರು ಹೇಳಿದ್ದಾರೆ.
ಕೇವಲ ಹಣಕ್ಕಾಗಿ ಮದುವೆಯಾದರೆ ಆ ಸಂಬಂಧ ಉಳಿಯುವುದು ಹೇಗೆ. ವಧು ವರನಲ್ಲಿ ಹೆಚ್ಚು ವಯಸ್ಸಿನ ಅಂತರವಿದ್ದರೂ ಅಲ್ಲಿ ಸಾಕಷ್ಟು ಸಮಸ್ಯೆಗಳು ಬರುತ್ತವೆ. ಹಾಗಾಗಿ ಯಾರೇ ಆಗಲಿ ಮದುವೆ ಆಗುವ ಸಮಯದಲ್ಲಿ ಯೋಚನೆ ಮಾಡಿ ತೀರ್ಮಾನ ತೆಗೆದುಕೊಂಡು ಮದುವೆಯಾಗಬೇಕು ಇಲ್ಲವಾದರೆ ಜೀವನಪೂರ್ತಿ ಅವರ ಜೊತೆಗೇ ಇದ್ದು ಬಹಳ ಕಷ್ಟಗಳನ್ನು ಪಡಬೇಕಾಗುತ್ತದೆ. ಏನೇ ಆಗಲಿ ಈ ನವ ಜೋಡಿಗೆ ಎಲ್ಲರೂ ಶುಭ ಹಾರೈಸೋಣ……