Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಸಾವಿರಾರು ಜನಗಳ ಮಧ್ಯೆ ಸೆಲ್ಫಿ ಕೇಳಿದ ಹುಡುಗಿ.. ಪುನೀತ್ ಏನ್ ಮಾಡುದ್ರು ಗೊತ್ತಾ ?? ಅದಕ್ಕೆ ಅಪ್ಪು ತುಂಬಾ ಇಷ್ಟ ಆಗೋದು, ವಿಡಿಯೋ ನೋಡಿ ಗೊತ್ತಾಗುತ್ತೆ !!

0

ಅಪ್ಪು ಅವರು ಒಂದು ಸಿನಿಮಾದ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿ ಅಭಿಮಾನಿಗಳ ಜೊತೆ ಬೆರೆತಿದ್ದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆ ಕಾರ್ಯಕ್ರಮಕ್ಕೆ ಸೇರಿದ್ದರು. ಈ ಸಾವಿರ ಜನಗಳ ಮಧ್ಯೆ ಒಂದು ಹುಡುಗಿ ಪುನೀತ್ ಅವರನ್ನು ಕುರಿತು ಸೆಲ್ಫಿ ಕೇಳಿದ್ದಾರೆ. ಇನ್ನು ನಮ್ಮ ಅಪ್ಪು ಅವರ ವ್ಯಕ್ತಿತ್ವ ಹೇಗೆ ಎಂದು ಎಲ್ಲರಿಗೂ ಗೊತ್ತು. ಅಷ್ಟು ಜನ ಇದ್ದರೂ ಕೂಡ ಪುನೀತ್ ಅವರು ಆ ಹುಡುಗಿಯ ಜೊತೆಗೆ ಸೆಲ್ಫಿಯನ್ನು ನೀಡಿದ್ದಾರೆ.

ಇನ್ನೂ ಅಪ್ಪು ಅವರು ಎಷ್ಟು ಸರಳತೆ ಎಂದರೆ ಅವರು ಚಿಕ್ಕ ವಯಸ್ಸಿನಿಂದ ಶ್ರೀಮಂತಿಕೆಯಲ್ಲಿ ಬೆಳೆದಿದ್ದರೂ ಕೂಡ ಎಲ್ಲರ ಜೊತೆಗೂ ತುಂಬ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಾರೆ. ಶೂಟಿಂಗ್ ಸೆಟ್ ನಲ್ಲೂ ಕೂಡ ಎಲ್ಲರನ್ನೂ ಭೇದಭಾವವಿಲ್ಲದೆ ತುಂಬ ಚೆನ್ನಾಗಿ ಮಾತನಾಡಿಸುತ್ತಾರೆ. ಊಟದ ವಿಷಯದಲ್ಲಂತೂ ಚಿತ್ರದ ಚಿತ್ರೀಕರಣ ಮಾಡುತ್ತಿರುವಾಗ ಮೊದಲು ಎಲ್ಲರೂ ಊಟ ಮಾಡಿದ ಮೇಲೆ ಪುನೀತ್ ಅವರು ಶೂಟಿಂಗ್ ಅನ್ನು ಶುರು ಮಾಡುತ್ತಿದ್ದರು.

ಇನ್ನೂ ಇವರ ಸಾಮಾಜಿಕ ಸೇವೆಗಳಂತೂ ಅಪಾರ ಎಂದು ಹೇಳಬಹುದು. ಅಪ್ಪು ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ತುಂಬ ಭೋಜನ ಪ್ರಿಯರು. ಇವರಿಗೆ ಎಲ್ಲಿ ರುಚಿಕರವಾದ ಅಡುಗೆ ಸಿಕ್ಕರು ಕೂಡ ಅದನ್ನು ಒಳ್ಳೆಯ ಹೃದಯದಿಂದ ಸವಿಯುತ್ತಾರೆ. ರಸ್ತೆ ಬದಿಗಳಿಂದ ಹಿಡಿದು ಹೋಟೆಲ್ ನ ವರೆಗೂ ಊಟವನ್ನು ಮನಸ್ಪೂರ್ವಕವಾಗಿ ಮಾಡುತ್ತಾರೆ.

ಪುನೀತ್ ಅವರು ತನ್ನ ಬಳಿ ಬಂದ ಅಭಿಮಾನಿಗಳು ಯಾವ ಸಮಯದಲ್ಲಿ ಎಲ್ಲೇ ಕಾಣಿಸಿದರೂ ಕೂಡ ಅವರನ್ನು ತುಂಬ ಪ್ರೀತಿಯಿಂದ ಮಾತನಾಡಿಸುತ್ತಾರೆ. ಯಾವ ಅಭಿಮಾನಿಯನ್ನು ಕೂಡ ಮಾತನಾಡಿಸದೆ ಅವರಿಗೆ ಬೇಸರ ಮಾಡುವುದಿಲ್ಲ. ಈ ಗುಣ ಎಲ್ಲಾ ಅಭಿಮಾನಿಗಳಿಗೂ ತುಂಬಾ ಇಷ್ಟವಾಗುತ್ತದೆ. ಎಷ್ಟೇ ಬ್ಯುಸಿ ಇದ್ದರೂ ಕೂಡ ಪುನೀತ್ ಅವರು ತಮ್ಮ ಅಭಿಮಾನಿಗಳನ್ನು ಮಾತನಾಡಿಸಿ ಕಳುಹಿಸುತ್ತಾರೆ.

ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮ ಜೊತೆ ಇಲ್ಲ. ಇವರು ಎಲ್ಲರನ್ನು ಬಿಟ್ಟು ಇಹಲೋಕಕ್ಕೆ ತ್ಯಜಿಸಿರುವುದು ಎಲ್ಲರಿಗೂ ನೋವನ್ನು ಉಂಟು ಮಾಡಿದೆ. ಇವರ ಅಕಾಲಿಕ ಮರಣವು ಎಲ್ಲರ ಮನಸ್ಸನ್ನು ಬೇಸರ ಮಾಡಿದೆ. ಇದರ ಜೊತೆಗೆ ಪುನೀತ್ ಅಭಿಮಾನಿಗಳಂತೂ ಸಾಕಷ್ಟು ಕಣ್ಣೀರು ಹಾಕಿದ್ದಾರೆ. ಪುನೀತ್ ಅವರು ವಿಕ್ರಮ್ ಆಸ್ಪತ್ರೆಯಲ್ಲಿ ಇದ್ದಾಗ ಆಸ್ಪತ್ರೆಯ ಮುಂದೆ ಸಾಕಷ್ಟು ಅಭಿಮಾನಿಗಳು ಸೇರಿದ್ದರು.

ಪುನೀತ್ ಅವರ ಮರಣವು ಗೊತ್ತಾಗಿದ್ದ ಕೂಡಲೇ ಸಾಕಷ್ಟು ಜನರು ಅಲ್ಲೇ ಕುಸಿದು ಬಿದ್ದಿದ್ದರು. ಇನ್ನು ಶಿವಣ್ಣ ರಾಘಣ್ಣ ಪುನೀತ್ ಅವರ ಪತ್ನಿ ಅಶ್ವಿನಿ ಮತ್ತು ಮಕ್ಕಳಾದ ದೃತಿ ವಂದನಾ ಕೂಡ ಈಗಲೂ ಸಹ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಅಕ್ಟೋಬರ್ 29 ರಂದು ಹೃದಯಾಘಾತದಿಂದ ಮರಣ ಹೊಂದಿದರು. ಇವರ ಅಂತ್ಯಕ್ರಿಯೆ ಅಕ್ಟೋಬರ್ 31 ರಂದು ಕಂಠೀರವ ಸ್ಟುಡಿಯೋದಲ್ಲಿ ಜರುಗಿತು…..

Leave A Reply