Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಕನ್ನಡ ಕಾಮಿಡಿ ನಟರ ಮಕ್ಕಳು, ಯಾರ್ ಯಾರು ಮತ್ತು ಹೇಗಿದ್ದಾರೆ ಗೊತ್ತೇ ?? ಇಲ್ಲಿದೆ ನೋಡಿ ಪೂರ್ತಿ ವಿಡಿಯೋ !!

0

ನಮ್ಮ ಸ್ಯಾಂಡಲ್ ವುಡ್ ನಲ್ಲಿರುವ ಕಾಮಿಡಿ ನಟರ ಮಕ್ಕಳು ಯಾರು ಮತ್ತು ಹೇಗಿದ್ದಾರೆ ಎಂದು ತಿಳಿದುಕೊಳ್ಳೋಣ ಬನ್ನಿ..ನಟ ಶರಣ್ ಅವರು ಫೆಬ್ರವರಿ 6 1972 ರಂದು ಹಾಸನದಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಜೆ.ವಿ ಕೃಷ್ಣ ಮತ್ತು ತಾಯಿಯ ಹೆಸರು ರಾಧಾಕೃಷ್ಣ ಎಂದು. ಶರಣ್ ಅವರು ಮೊದಲು ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಸಾಕಷ್ಟು ನಟಿಸಿದ್ದಾರೆ. ಇದಾದ ಮೇಲೆ ಇವರು ತಮ್ಮ 100ನೆಯ ಚಿತ್ರ ಆಗಿರಿವ.

ರಾಂಬೋ ಚಿತ್ರದ ಮೂಲಕ ನಾಯಕನಟರಾಗಿ ನಟಿಸುವುದಕ್ಕೆ ಶುರು ಮಾಡಿಕೊಂಡರು. ಹೌದು ಶರಣ್ ಅವರು 1996 ರಲ್ಲಿ ಪ್ರೇಮ ಪ್ರೇಮ ಪ್ರಣಯ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇನ್ನೂ ರಾಂಬೋ ಚಿತ್ರ ಆದಮೇಲೆ ಸಾಕಷ್ಟು ಚಿತ್ರಗಳಲ್ಲಿ ಇವರು ನಾಯಕರಾಗಿ ಅಭಿನಯಿಸಿದ್ದಾರೆ. ಹಾಗೆಯೇ ಕೆಲ ಕನ್ನಡದ ಹಾಡುಗಳನ್ನು ಕೂಡ ಹಾಡಿದ್ದಾರೆ. ಇನ್ನು ಶರಣ್ ಅವರು ಪಲ್ಲವಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಹೃದಯ್ ಎನ್ನುವ ಮಗ ಇದ್ದಾನೆ.

ಸಾಧುಕೋಕಿಲ ಅವರು ಮಾರ್ಚ್ 24 1966 ರಂದು ಜನಿಸಿದ್ದಾರೆ. ಇವರು ಸ್ಯಾಂಡಲ್ ವುಡ್ ನಲ್ಲಿ ಖ್ಯಾತ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದಾರೆ. ಇವರ ತಂದೆಯ ಹೆಸರು ನಟೇಶ್ ಮತ್ತು ತಾಯಿಯ ಹೆಸರು ಮಂಗಳ. ಸಾಧುಕೋಕಿಲಾ ಅವರು 1998 ರಂದು ಬಿಡುಗಡೆಯಾದ ಸಾರಿ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿಕೊಂಡರು. ಹೀಗೆ ಸಾಧುಕೋಕಿಲಾ ಅವರು ಸಾಕಷ್ಟು ಹಿಟ್ ಚಿತ್ರಗಳಲ್ಲಿ ಹಾಸ್ಯ ನಟರಾಗಿ ಅಭಿನಯ ಮಾಡಿದ್ದಾರೆ. ಇವರು 1993 ರಲ್ಲಿ ಸಲೀನಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಸೂರಜ್ ಮತ್ತು ಸೃಜನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

 

ಜಗ್ಗೇಶ್ ಅವರು ಮಾರ್ಚ್ 17 1963 ರಂದು ಮಾಯಸಂದ್ರದಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಶಿವಲಿಂಗಪ್ಪ ಮತ್ತು ತಾಯಿಯ ಹೆಸರು ನಂಜಮ್ಮ. ಜಗ್ಗೇಶ್ ಅವರು ಕೂಡ ಸಾಕಷ್ಟು ಚಿತ್ರಗಳಲ್ಲಿ ಹಾಸ್ಯ ನಟರಾಗಿ ಅಭಿನಯಿಸಿದ್ದಾರೆ. ಇವರು 1982 ರಲ್ಲಿ ಇಬ್ಬನಿ ಕರಗಿತು ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಜೀವನವನ್ನು ಶುರುಮಾಡಿಕೊಂಡರು. ಇವರು 1984 ರಲ್ಲಿ ಪರಿಮಳ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಯತಿರಾಜ್ ಮತ್ತು ಗುರುರಾಜ್ ಎನ್ನುವ ಇಬ್ಬರು ಗಂಡು ಮಕ್ಕಳಿದ್ದಾರೆ.

ಶಿವರಾಜ್ ಕೆ.ಆರ್ ಪೇಟೆ ಅವರು ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುವದರ ಜೊತೆಗೆ ಪೋಷಕ ಪಾತ್ರಗಳಲ್ಲಿ ಕೂಡ ಅಭಿನಯಿಸುತ್ತಾರೆ. ಇನ್ನೂ ಶಿವರಾಜ್ ಅವರು ಶ್ರುತಿ ಎನ್ನುವವರನ್ನು 2014 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರ ಮಗನ ಹೆಸರು ವಂಶಿಕ್.

ಕುರಿ ಪ್ರತಾಪ್ ಅವರು ಮೈಸೂರಿನಲ್ಲಿ ಜನಿಸಿದ್ದು ಇವರು ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡಿ ಸಖತ್ ಜನಪ್ರಿಯರಾಗಿದ್ದಾರೆ. ಇನ್ನು ಕುರಿ ಪ್ರತಾಪ್ ಅವರು ಮಜಾ ಟಾಕೀಸ್ ಎನ್ನುವ ರಿಯಾಲಿಟಿ ಕಾರ್ಯಕ್ರಮದಲ್ಲಿ ಕೂಡ ಫೇಮಸ್ ಆಗಿದ್ದಾರೆ. ಕುರಿ ಪ್ರತಾಪ್ ಅವರು ಸರಿತಾ ಸಿಂಗ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಮಕ್ಕಳು ಹೇಗಿದ್ದಾರೆ ಎಂದು ಇಲ್ಲಿ ನೋಡಿ.

ಕಾಶಿನಾಥ್ ಅವರು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದಾರೆ. ಇವರು ಮೇ 8 1951 ರಂದು ಕುಂದಾಪುರದಲ್ಲಿ ಜನಿಸಿದ್ದರು. ಇವರು 1976 ರಲ್ಲಿ ಅಪರೂಪದ ಅತಿಥಿಗಳು ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಇವರು ಕೇವಲ ನಟ ಮಾತ್ರರಲ್ಲ ನಿರ್ಮಾಪಕ ನಿರ್ದೇಶಕ ಮತ್ತು ರೈಟರ್ ಕೂಡ ಹೌದು ಇನ್ನೂ ಕಾಶಿನಾಥ್ ಅವರು ಚಂದ್ರಪ್ರಭಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದರು. ಇವರ ಮಕ್ಕಳ ಹೆಸರು ಅಭಿಮನ್ಯು ಕಾಶೀನಾಥ್ ಮತ್ತು ಅಮೃತವರ್ಷಿಣಿ ಕಾಶಿನಾಥ್. ಕಾಶಿನಾಥ್ ಅವರು ಕ್ಯಾನ್ಸರ್ ಕಾಯಿಲೆಯಿಂದ ಜನವರಿ 18 2018 ರಂದು ಸಾವನ್ನಪ್ಪಿದರು.

ಮೋಹನ್ ಜುನೇಜಾ ಅವರು ಕೂಡ ಸಾಕಷ್ಟು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಮತ್ತು ಹಾಸ್ಯದ ಪಾತ್ರಗಳನ್ನು ಮಾಡಿ ಸಖತ್ ಫೇಮಸ್ ಆಗಿದ್ದರು. ಇವರು ಕೂಡ ಇತ್ತೀಚೆಗಷ್ಟೇ ಕೆಲ ಅನಾರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದರು. ಇಲ್ಲಿ ನೀವು ಮೋಹನ್ ಜುನೇಜಾ ಅವರ ಮಗನನ್ನು ನೋಡಬಹುದು.

ಬುಲೆಟ್ ಪ್ರಕಾಶ್ ಅವರು ಏಪ್ರಿಲ್ 2 1976 ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಇವರು ಕೂಡ ಸಾಕಷ್ಟು ಚಿತ್ರಗಳಲ್ಲಿ ಹಾಸ್ಯ ನಟರಾಗಿ ನಟಿಸಿದ್ದು ಸಕ್ಕತ್ ಜನಪ್ರಿಯರಾಗಿದ್ದರು. ಇವರು ಕನ್ನಡದಲ್ಲಿ ಸುಮಾರು 325 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇವರು ಕೂಡ ಅನಾರೋಗ್ಯ ಸಮಸ್ಯೆಗಳಿಂದ ಏಪ್ರಿಲ್ 6 2020 ರಂದು ಸಾವನ್ನಪ್ಪಿದರು. ಇವರ ಪತ್ನಿಯ ಹೆಸರು ಮಂಜುಳಾ ಪ್ರಕಾಶ್ ಮತ್ತು ಮಕ್ಕಳ ಹೆಸರು ರಕ್ಷಕ್ ಸೇನಾ ಮತ್ತು ಮೋನಿಕಾ ವರ್ಷಿಣಿ…..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply