ಅಪ್ಪು ಬಳಸುತ್ತಿದ್ದ ವಸ್ತುವನ್ನು ಅಭಿಮಾನಿಗೆ ಉಡುಗೊರೆಯಾಗಿ ಕೊಟ್ಟ ಅಶ್ವಿನಿ ಪುನೀತ್..!!1 ಯಾಕೆ ಗೊತ್ತಾ ಕಾರಣ ಬೇರೆಯೇ ಇದೆ ನೋಡಿ ಸೂಪರ್ ಅಂತೀರಾ !!
ನಮ್ಮ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಅಕ್ಟೋಬರ್ 29 ರಂದು ಹೃದಯಾಘಾತದಿಂದ ಮರಣ ಹೊಂದಿದರು. ಇವರು ಬದುಕಿದ್ದಾಗ ಇವರು ಮಾಡಿದ ಸಮಾಜ ಸೇವೆಗಳು ಯಾವುದು ಕೂಡ ಹೊರಗೆ ಬಂದಿಲ್ಲ. ಆದರೆ ಅವರು ತೀರಿಕೊಂಡ ಮೇಲೆ ಅವರು ಮಾಡಿದ ಅಪಾರ ಸಮಾಜ ಸೇವೆಗಳು ಒಂದೊಂದಾಗಿ ನಮಗೆ ತಿಳಿದು ಬರುತ್ತಿದೆ.
ಇಂತಹ ವ್ಯಕ್ತಿತ್ವ ಮತ್ತು ವ್ಯಕ್ತಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಹುಟ್ಟಿ ನಟರಾಗಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಕ್ಕೆ ನಮ್ಮ ಕನ್ನಡಿಗರಿಗೆ ಹೆಮ್ಮೆ ವಿಷಯ ಆಗಿದೆ. ಇನ್ನು ಪುನೀತ್ ಅವರು ತೀರಿಕೊಂಡು ಸುಮಾರು 3 ತಿಂಗಳು ಆಗುತ್ತಿದ್ದರೂ ಕೂಡ ಕಂಠೀರವ ಸ್ಟುಡಿಯೋಗೆ ಅವರ ಅಭಿಮಾನಿಗಳು ಪ್ರತಿ ದಿನ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಆಗಮನ ಮಾಡುತ್ತಿದ್ದಾರೆ.
ಇನ್ನೂ ಅಪ್ಪು ಅವರ ಅಭಿಮಾನಿಗಳು ಕೂಡ ಪುನೀತ್ ಅವರ ಮಾರ್ಗದಲ್ಲಿಯೇ ನಡೆಯುತ್ತಾ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಾ ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ. ಅಪ್ಪು ಅವರಿಗೆ ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲ ಸಾಕಷ್ಟು ಅಭಿಮಾನಿಗಳು ವಿದೇಶದಲ್ಲೂ ಕೂಡ ಇದ್ದಾರೆ. ಇವರ ಮರಣದ ವಿಷಯ ತಿಳಿಯುತ್ತಿದ್ದಂತೆಯೇ ಎಲ್ಲರೂ ಕೂಡ ಕಣ್ಣೀರನ್ನು ಇಟ್ಟಿದ್ದಾರೆ ಮತ್ತು ಈಗಲೂ ಕೂಡ ಅಪ್ಪು ಅವರ ನೆನಪಿನಲ್ಲಿ ಇದ್ದಾರೆ.
ಇನ್ನು ಅಪ್ಪು ಅವರಿಗೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಅಪ್ಪು ಅವರನ್ನು ಚಿಕ್ಕ ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಇವರ ಡ್ಯಾನ್ಸ್ ನಟನೆ ವ್ಯಕ್ತಿತ್ವ ಒಳ್ಳೆಯ ಮನಸ್ಸು ಎಲ್ಲವೂ ಕೂಡ ಎಲ್ಲರಿಗೂ ಅಚ್ಚುಮೆಚ್ಚು. ಇನ್ನೂ ಅಪ್ಪು ಅವರು ನಿಧನರಾದ ಮೇಲೆ ಸಾಕಷ್ಟು ಅಭಿಮಾನಿಗಳು ಅವರ ಸಮಾಧಿಯನ್ನು ನೋಡಲು ಬಹಳ ದೂರದಿಂದ ಬರುತ್ತಿದ್ದಾರೆ.
ಇದರಂತೆಯೇ ಒಬ್ಬ ಅಭಿಮಾನಿ ಹಿಮಾಲಯದಿಂದ ಸೈಕಲ್ ನಲ್ಲಿ ಕಂಠೀರವ ಸ್ಟುಡಿಯೋಗೆ ಬಂದಿದ್ದಾರೆ. ಹೌದು ಈತನ ಹೆಸರು ಗುರುಪ್ರಕಾಶ್ ಎಂದು. ಹಿಮಾಲಯದಿಂದ ಬೆಂಗಳೂರಿಗೆ ಸುಮಾರು 3300 ಕಿಮೀ ದೂರವಿದೆ. ಅಲ್ಲಿಂದ ಇಲ್ಲಿಯವರೆಗೂ ಸೈಕಲನ್ನು ತುಳಿದುಕೊಂಡು ಅಪ್ಪು ಅವರ ಸಮಾಧಿಯನ್ನು ನೋಡಿ ಅಶ್ವಿನಿ ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಇನ್ನು ಅಶ್ವಿನಿ ಅವರು ಗುರು ಪ್ರಕಾಶ್ ಅವರಿಗೆ ಪುನೀತ್ ಅವರು ಬಳಸುತ್ತಿದ್ದ ಕನ್ನಡಕವನ್ನು ಉಡುಗೊರೆಯಾಗಿ ನೀಡಿದ್ದಾರೆ…..