ಕನ್ನಡತಿ ಧಾರಾವಾಹಿಯ ಮುಖಾಂತರ ಜನಪ್ರಿಯ ಆಗಿರುವ ರಂಜನಿ ರಾಘವನ್ ಅವರು ಎಷ್ಟು ಚೆನ್ನಾಗಿ ಅಡಿಕೆ ಸುಲಿಯುತ್ತಿದ್ದಾರೆ ಗೊತ್ತಾ. ಇನ್ನು ಇವರು ಈ ವೀಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಹಿಂದೆ ರಂಜನಿ ರಾಘವನ್ ಅವರು ಒತ್ತು ಶಾವಿಗೆ ಮಾಡಿರುವ ವಿಡಿಯೋವನ್ನು ಕೂಡ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಇನ್ನೂ ರಂಜನಿ ರಾಘವನ್ ಅವರು ಮಾರ್ಚ್ 29 1994 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ತಮ್ಮ ಕೆರಿಯರ್ ಅನ್ನು ಕಿಲಾಡಿ ಚನ್ನಮ್ಮ ಎನ್ನುವ ಧಾರಾವಾಹಿಯ ಮುಖಾಂತರ ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿದರು. ಇದಾದ ಮೇಲೆ ಆಕಾಶ ದೀಪ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದಾರೆ. ತದನಂತರ ಪುಟ್ಟಗೌರಿ ಮದುವೆ ಎನ್ನುವ ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ.
ಇದಾದ ಮೇಲೆ ಇಷ್ಟ ದೇವತೆ ಎನ್ನುವ ಸೀರಿಯಲ್ ನಲ್ಲೂ ಕೂಡ ಇವರ ನಟನೆ ಅದ್ಭುತ ಎಂದು ಹೇಳಬಹುದು. ಇನ್ನು ಇದರ ಜೊತೆಗೆ ಮಲಯಾಳಂನಲ್ಲಿ ಪೌರ್ಣಮಿ ತಿನ್ಕಲ್ ಎನ್ನುವ ಧಾರಾವಾಹಿಯಲ್ಲೂ ಕೂಡ ನಟಿಸಿದ್ದಾರೆ. ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಧಾರಾವಾಹಿಯಲ್ಲಿ ಭುವನೇಶ್ವರಿ ಎನ್ನುವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇನ್ನೂ ಕನ್ನಡತಿ ಧಾರಾವಾಹಿಯು ಜನವರಿ 27 2020 ರಿಂದ ಪ್ರಸಾರವಾಗುತ್ತಿದೆ. ಇದನ್ನು ಯಶವಂತ್ ಪಾಂಡು ಅವರು ನಿರ್ದೇಶನ ಮಾಡುತ್ತಿದ್ದಾರೆ ಮತ್ತು ಪ್ರಕಾಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಯೇ ಇದ್ರಲ್ಲಿ ನಟಿ ರಂಜನಿ ರಾಘವನ್ ಅವರು ಕಿರಣ್ ರಾಜ್ ಅವರ ಜೊತೆಗೆ ಕಿರುತೆರೆಯನ್ನು ಹಂಚಿಕೊಂಡಿದ್ದಾರೆ. ಇನ್ನು ಬೆಳ್ಳಿ ತೆರೆಗೆ ಬಂದರೆ ರಂಜನಿ ರಾಘವನ್ ಅವರು 2017 ರಲ್ಲಿ ರಾಜಹಂಸ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.
ತದನಂತರ ಟಕ್ಕರ್ ಮತ್ತು ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ರಂಜನಿ ರಾಘವನ್ ಅವರಿಗೆ 2018 ರಲ್ಲಿ ಮಿಸ್ ಇಂಡಿಯಾ ಸೂಪರ್ ಮಾಡೆಲ್ ಎನ್ನುವ ಅವಾರ್ಡ್ ಅನ್ನು ಸಹ ಗೆದ್ದಿದ್ದಾರೆ. ತದನಂತರ 2022 ರಲ್ಲಿ ಯೂತ್ ಐಕಾನ್ ಅವಾರ್ಡ್ ಅನ್ನು ಕೂಡ ಸಂಪಾದನೆ ಮಾಡಿದ್ದಾರೆ. ಹಾಗೆಯೇ ಇವರು ಕಥೆ ಡಬ್ಬಿ ಎನ್ನುವ ಪುಸ್ತಕವನ್ನು ಸಹ ಬರೆದಿದ್ದಾರೆ…..